Advertisement

“ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ಮತದಾರರ ಜಾಗೃತಿ

09:33 PM Apr 10, 2019 | sudhir |

ಬೈಂದೂರು: ರೋಟರಿ ಕ್ಲಬ್‌, ಜೆಸಿಐ ಉಪ್ಪುಂದ, ಮಾರಿಕಾಂಬಾ ಯೂತ್‌ ಕ್ಲಬ್‌ ಕಳವಾಡಿ,ನಮ್ಮ ಭೂಮಿ ಸಂಸ್ಥೆ,ರಾಷ್ಟ್ರೀಯ ಸೇವಾ ಯೋಜನೆ ಘಟಕ ಸ. ಪ್ರ. ದ. ಕಾಲೇಜು ಬೈಂದೂರು ಹಾಗೂ ರೀಚರ್ಡ್‌ ಅಲ್ಮೇಡಾ ಮೆಮೋರಿಯಲ್‌ ಕಾಲೇಜು ನಾವುಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಸಂದೇಶದೊಂದಿಗೆ ಮತದಾರರ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಬೈಂದೂರಿನಿಂದ ನಾವುಂದದವರೆಗೆ ಬೈಕ್‌ ರ್ಯಾಲಿ ನಡೆಸಲಾಯಿತು.

Advertisement

ಬೈಂದೂರು ತಹಶೀಲ್ದಾರ ಬಸಪ್ಪ ಪೂಜಾರ್‌ ಬೈಕ್‌ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಮತದಾರರು ಸ್ವಯಂ ಜಾಗೃತರಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ಇದುವರೆಗಿನ ಎಲ್ಲ ಗರಿಷ್ಠ ಮತದಾನ ದಾಖಲೆಯನ್ನು ಈ ಬಾರಿ ನಾವು ಮೀರಿಸ‌ಬೇಕು ಎಂದರು.

ಸಮಾರೋಪ ಸಮಾರಂಭದಲ್ಲಿ ರೀಚರ್ಡ್‌ ಅಲ್ಮೇಡಾ ಮೆಮೋರಿಯಲ್‌ ಕಾಲೇಜಿನ ಯುವ ಮತದಾರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿ ಕುಸುಮಾಧರ ಗೌಡ ಮಾತನಾಡಿದರು.

ನಮ್ಮ ಭೂಮಿ ಸಂಸ್ಥೆಯ ಪ್ರಭಾಕರ, ರೋಟರಿ ಕ್ಲಬ್‌ ಅಧ್ಯಕ್ಷ ಐ. ನಾರಾಯಣ, ಉಪ್ಪುಂದ ಜೆಸಿಐ ಅಧ್ಯಕ್ಷ ಪುರಂದರ ಖಾರ್ವಿ, ಮಾರಿಕಾಂಬಾ ಯೂತ್‌ ಕ್ಲಬ್‌ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ನಾವುಂದ ರೀಚರ್ಡ್‌ ಅಲ್ಮೇಡಾ ಕಾಲೇಜಿನ ಪ್ರಾಂಶುಪಾಲ ಜಿ.ಎಸ್‌. ಹೆಗಡೆ, ಎನ್ನೆಸ್ಸೆಸ್‌ ಘಟಕದ ಮುಖ್ಯಸ್ಥೆ ಪೂರ್ಣಿಮಾ, ಮಂಗೇಶ್‌ ಶ್ಯಾನುಭಾಗ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next