Advertisement

ಮಧ್ಯಪ್ರದೇಶದಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ: ಶಿವರಾಜ್‌

04:27 PM Dec 12, 2018 | Team Udayavani |

ಹೊಸದಿಲ್ಲಿ : ಮಧ್ಯ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ ಎಂದು ಕಳೆದ 15 ವರ್ಷ ರಾಜ್ಯದ ಸಿಎಂ ಆಗಿ ದುಡಿದಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

Advertisement

ಕತ್ತು ಕತ್ತಿನ ಹೋರಾಟದ ಫ‌ಲವಾಗಿ ಕೊನೇ ಕ್ಷಣದ ವರೆಗೂ ಮತ ಎಣಿಕೆಯ ಪ್ರಕ್ರಿಯೆಯಲ್ಲಿ ಸೋಲು ಗೆಲುವಿನ ಕಸರತ್ತು ನಡೆಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ ಅತ್ಯಂತ ರೋಚಕ ಕ್ಲೈಮಾಕ್ಸ್‌ ಕಂಡಿದ್ದವು. ಅದರಲ್ಲಿ ಕಾಂಗ್ರೆಸ್‌ ಕೊನೆಗೂ ವಿಜಯಿಯಾಗಿ ಮೂಡಿ ಬಂದಿತ್ತು. 

ಪರಿಣಾಮವಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜ್‌ ಸಿಂಗ್‌ ಚೌಹಾಣ್‌, ಪಕ್ಷದ ಕಾರ್ಯಕರ್ತರು ಮಾಡಿರುವ ಅಹರ್ನಿಶಿ ಕ್ಷೇತ್ರ ಕಾರ್ಯಕ್ಕೆ,  ವರಿಷ್ಠ ನಾಯತ್ವ ನೀಡಿದ ಬೆಂಬಲಕ್ಕೆ ಕೃತಜ್ಞತೆ ಅರ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next