Advertisement

Yadagiri; ಹೈಕಮಾಂಡ್‌ ಹೇಳಿದರೆ ಸಿಎಂ ಆಗಲೂ ನಾನು ರೆಡಿ: ಸಚಿವ ಶರಣಬಸಪ್ಪ ದರ್ಶನಾಪುರ

02:00 PM Sep 09, 2024 | Team Udayavani |

ಯಾದಗಿರಿ: ಸಿಎಂ‌ ಬದಲಾವಣೆ‌ ವಿಚಾರವಾಗಿ ನಮ್ಮ ಪಕ್ಷದಲ್ಲಿ ಯಾರು ಕೂಡ ಆಸೆ ವ್ಯಕ್ತಪಡಿಸುತ್ತಿಲ್ಲ. ಮನುಷ್ಯ ಅಂದ ಮೇಲೆ ಆಸೆ ಇದ್ದೆ ಇರುತ್ತದೆ. ಆದರೆ ಅದು ಸಿಎಂ ಕುರ್ಚಿ ಖಾಲಿಯಾದ ಮೆಲೆ, ಆದರೆ ಸಿಎಂ ಕುರ್ಚಿ ಖಾಲಿ ಇಲ್ಲವಲ್ಲ. ಹೈಕಮಾಂಡ್ ಹೇಳಿದರೆ ನಾನು ಕೂಡ ಸಿಎಂ ಆಗಲು ರೆಡಿ ಇದ್ದೇನೆ ಎಂದು ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ (Sharanabasappa Darshanapur) ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾಗಲು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಶಾಸಕರಾದ ಮೇಲೆ ಸಚಿವರಾಗುವ ಆಸೆ ಇರುತ್ತೆ ಸಚಿವರಾದ ಮೇಲೆ ಸಿಎಂ ಆಗುವ ಆಸೆ ಇರುತ್ತದೆ ಎಂದರು.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರು ಎಲ್ಲೂ ಕೂಡ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಆರೋಪ ಬರಬೇಕೆಂದರೆ ನಮ್ಮಿಂದ ಅಧಿಕಾರ ದುರುಪಯೋಗ ಆಗಬೇಕಲ್ಲ, ಯಾರ ಪರವಾಗಿ ತೀರ್ಪು ಬರುತ್ತದೆಂದು ನಮಗೆ ಹೇಳಲಾಗದು. ತೀರ್ಪು ಬಂದ ಮೇಲೆ ನೋಡುವ ಎಂದರು.

ಮುಡಾದಲ್ಲಿ ಅಕ್ರಮ ಆಗಿರಬಹುದು ಆದರೆ ಸಿಎಂ ಅವರ ಹಸ್ತಕ್ಷೇಪ ಎಲ್ಲೂ ಇಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೆ ದಿನ 899 ಸೈಟ್ ಕೊಟ್ಟಿರುವ ಬಗ್ಗೆ ಇವತ್ತು ವರದಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next