Advertisement

Madhya Pradesh: ನಾನು ತಿರಸ್ಕೃತನಲ್ಲ: ಶಿವರಾಜ್‌ ಚೌಹಾಣ್‌

12:34 AM Jan 14, 2024 | Team Udayavani |

ಭೋಪಾಲ್‌: “ನಾನು ಮಾಜಿ ಮುಖ್ಯಮಂತ್ರಿಯೇ ಹೊರತು, ತಿರಸ್ಕೃತ ಮುಖ್ಯಮಂತ್ರಿಯಲ್ಲ! ಅಧಿಕಾರದಿಂದ ಕೆಳಗಿಳಿದಿದ್ದರೂ ಜನರಿಗೆ ನನ್ನ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ’ ಹೀಗೆಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

Advertisement

ಚೌಹಾಣ್‌ಗೆ ಬಿಜೆಪಿ ಯಾವ ಪಟ್ಟ ನೀಡಲಿದೆ ಎನ್ನುವ ಗೊಂದಲಗಳ ನಡುವೆಯೇ ಈ ಬೆಳವಣಿಗೆ ವರದಿಯಾಗಿರುವುದು ಮಹತ್ವ ಪಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಚೌಹಾಣ್‌, ಸಿಎಂ ಪಟ್ಟದಿಂದ ಕೆಳಗಿಳಿದರೂ ಎಲ್ಲಿಯೇ ಹೋದರೂ ಜನ ಈಗಲೂ “ಮಾಮಾ’ ಎಂದು ಸಂಬೋಧಿಸುತ್ತಾರೆ, ಜನರ ಪ್ರೀತಿಯೇ ನನ್ನ ಸಂಪತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next