Advertisement

Politics: ನಾನು ಸೈಲೆಂಟ್‌ ಆಗುವವನಲ್ಲ: ಬೇಳೂರು ಗೋಪಾಲಕೃಷ್ಣ

12:00 AM Nov 12, 2023 | Team Udayavani |

ಶಿವಮೊಗ್ಗ: ನನಗೆ ಸೈಲೆಂಟ್‌ ಆಗಿ ಇರು ಅಂತ ಯಾರೂ ಹೇಳಿಲ್ಲ. ಸೈಲೆಂಟ್‌ ಆಗುವ ವ್ಯಕ್ತಿ ನಾನಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನಿಯೋಗದವರು ನನ್ನ ವಿರುದ್ಧ ದೂರು ಕೊಟ್ಟಿದ್ದಾರಂತೆ. ಅದರ ಬಗ್ಗೆ ಪ್ರಶ್ನಿಸಲು ಹೋಗುವುದಿಲ್ಲ. ಈ ಬಗ್ಗೆ ರಾಜ್ಯ-ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಸಣ್ಣಪುಟ್ಟ ಸಮಸ್ಯೆ ಸರಿಪಡಿಸುತ್ತಾರೆ ಎಂದರು.

ಚುನಾವಣೆ ಮುಗಿದು ಆರು ತಿಂಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದೆ. ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುವೆ. ಯಡಿಯೂರಪ್ಪ ಪುತ್ರ ಅಂತ ಹುದ್ದೆ ಕೊಟ್ಟಿದ್ದಾರೆ. ಪಕ್ಷದಲ್ಲಿ ಬಹಳ ಹಿರಿಯರು ಇದ್ದರೂ ಅವರನ್ನು ತಪ್ಪಿಸಿ ಇವರಿಗೆ ನೀಡಲಾಗಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ 65 ಸ್ಥಾನ ಬಂದಿದೆ. ವಿಜಯೇಂದ್ರ ಅಧ್ಯಕ್ಷರಾದರೆ ಕಾಂಗ್ರೆಸ್‌ಗೆ ನಷ್ಟವಿಲ್ಲ. ಬಿಜೆಪಿಗೆ ನಷ್ಟ. ಇದು ಮುಳ್ಳಿನ ಹಾಸಿಗೆ. ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next