Advertisement

ಪುತ್ರನಲ್ಲ, ನಾನೇ ಅಭ್ಯರ್ಥಿ

11:08 PM Aug 03, 2019 | Team Udayavani |

ರಾಯಚೂರು: ಶಾಸಕರ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಶೀಘ್ರವೇ ತೀರ್ಪು ಬರುವ ವಿಶ್ವಾಸವಿದೆ. ಆದರೆ, ಉಪಚುನಾವಣೆಯಲ್ಲಿ ತಮ್ಮ ಪುತ್ರನಲ್ಲ, ತಾವೇ ಸ್ಪ ರ್ಧಿಸುವುದಾಗಿ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್‌ ಗೌಡ ಪಾಟೀಲ ತಿಳಿಸಿದರು. ಸ್ವ ಕ್ಷೇತ್ರ ಮಸ್ಕಿಗೆ ಬಹಳ ದಿನಗಳ ಬಳಿಕ ಭೇಟಿ ನೀಡಿದ್ದ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಹಿರಿತನಕ್ಕೆ ಬೆಲೆಯೇ ಇಲ್ಲ.

Advertisement

ಅದೊಂದು ಮುಳುಗುತ್ತಿರುವ ಹಡಗು. ಇದೇ ಕಾರಣಕ್ಕೆ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ರಮೇಶ್‌ ಕುಮಾರ್‌ ಅವರು ನನ್ನ ರಾಜೀನಾಮೆ ಅಂಗೀಕರಿಸದೆ ಅನರ್ಹಗೊಳಿಸಿರುವ ಕ್ರಮ ಸರಿಯಲ್ಲ ಎಂದರು. ಸುಪ್ರೀಂಕೋರ್ಟ್‌ ತೀರ್ಪು ಬಂದ ಮೇಲೆ ಯಾವ ಪಕ್ಷಕ್ಕೆ ಸೇರಬೇಕು ಎಂಬುದನ್ನು ಕ್ಷೇತ್ರದ ಬೆಂಬಲಿಗರು, ಹಿತೈಷಿಗಳ ಸಲಹೆಯಂತೆ ನಿರ್ಧರಿಸುವುದಾಗಿ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next