Advertisement

ಬೆಕ್ಕಿನ ಕಿರುಚಾಟಕ್ಕೆ ಅಮಾಯಕ ಬಲಿ…ಏನಿದು ವಿಚಿತ್ರ ಘಟನೆ?

04:23 PM Aug 30, 2022 | Team Udayavani |

ಹೈದರಾಬಾದ್: ಬೆಕ್ಕಿನ ನಿರಂತರ ಕೂಗಾಟಕ್ಕೆ ಸಿಟ್ಟಾದ ನೆರೆಮನೆಯ ಅಪ್ರಾಪ್ತ ಬಾಲಕರು ಬೆಕ್ಕಿನ ಮಾಲೀಕರಿಗೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

Advertisement

ವರದಿಗಳ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದ ನಿವಾಸಿ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) ಮತ್ತು ಅಪ್ರಾಪ್ತ ಬಾಲಕ (17) ಬಂಜಾರಾ ಹಿಲ್ಸ್ ರಸ್ತೆ ಸಂಖ್ಯೆ 10 ರ ಮಿಥಿಲಾನಗರದಲ್ಲಿರುವ ಡಾ. ಮೆನನ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಎಜಾಜ್ ಹುಸೇನ್ (20) (ಮೃತ ವ್ಯಕ್ತಿ) ಮತ್ತು ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಸಹ ಅದೇ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ವಾಸವಾಗಿದ್ದರು.

ಎಜಾಜ್ ಮತ್ತು ಬ್ರಾನ್ ಇಬ್ಬರೂ ತಮ್ಮ ಕೆಲಸ ಮುಗಿಸಿ  ರೂಮಿಗೆ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಸಿಕ್ಕ ಬೆಕ್ಕೊಂದನ್ನು ರೂಮಿಗೆ ಎತ್ತಿಕೊಂಡು ಹೋಗಿದ್ದಾರೆ. ಈ ಬೆಕ್ಕು ರಾತ್ರಿ ವೇಳೆ ನಿರಂತರವಾಗಿ ಕೂಗುತ್ತಿತ್ತು. ಈ ಕೂಗು ಹರೀಶ್ವರ್ ರೆಡ್ಡಿಯ ನಿದ್ರೆಗೆ ಭಂಗ ತರುತ್ತಿದ್ದರಿಂದ ಅಸಮಾಧಾನಗೊಂಡಿದ್ದಾನೆ.  ಕುಡಿತದ ಅಮಲಿನಲ್ಲಿದ್ದ ರೆಡ್ಡಿ ಕೋಪದಿಂದ ಎಜಾಝ್‌ ರೂಮಿಗೆ ಹೋಗಿ ಅಸಮಾಧಾನ ಹೊರಹಾಕಿದ್ದಾನೆ. ಈ ವೇಳೆ ಘರ್ಷಣೆ ನಡೆದಿದ್ದು, ಕೋಪದ ಭರದಲ್ಲಿ ಅಪ್ರಾಪ್ತ ಬಾಲಕ ಎಜಾಝ್‌ ಹುಸೇನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದ ಎಜಾಝ್‌ನನ್ನು ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಜಮ್ಮು-ಕಾಶ್ಮೀರ: 50ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರ ರಾಜೀನಾಮೆ, ಆಜಾದ್ ಗೆ ಬೆಂಬಲ

Advertisement

ಆರಂಭದಲ್ಲಿ ಹರೀಶ್ವರ್ ರೆಡ್ಡಿ, ಎಜಾಝ್‌ ಮೇಲೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸುಳ್ಳು ದೂರು ದಾಖಲಿಸಿದ್ದಾನೆ.  ಬಳಿಕ ಮೃತನ ಸ್ನೇಹಿತ ಬ್ರಾನ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next