Advertisement

ಹೆಚ್ ವಿಶ್ವನಾಥ್ ಒಬ್ಬ‌ ಹುಚ್ಚ…  ಅವರ ಆರೋಗ್ಯ ತಪಾಸಣೆ ಮಾಡಿಸಬೇಕು: ಎಸ್ .ಆರ್. ವಿಶ್ವನಾಥ್

01:22 PM Jun 17, 2021 | Team Udayavani |

ಬೆಂಗಳೂರು: ಹೆಚ್ ವಿಶ್ವನಾಥ್ ಒಬ್ಬ ಹುಚ್ಚ,ಅವರನ್ನು ಮೊದಲು ಆಸ್ಪತ್ರೆಗೆ ಸೇರಿಸಬೇಕು. ಉಂಡ ಮನೆಗೆ ಎರಡು ಬಗೆಯುವ ಬುದ್ದಿ ಅವರದ್ದು, ರಸ್ತೆಯಲ್ಲಿ ಅರೆ ಹುಚ್ಚರ ರೀತಿ ಓಡಾಡುವವರ ರೀತಿ ವಿಶ್ವನಾಥ್ ಆಗಿದ್ದಾರೆ. ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿ, ತಪಾಸಣೆ ಮಾಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.

Advertisement

ಸಿಎಂ ಬದಲಾವಣೆ ಆಗಬೇಕು ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಏನು ಮಾತಾಡುತ್ತಿದ್ದಾರೆ ಎಂಬುದರ ಬಗ್ಗೆ ಅವರಿಗೆ ಗೊತ್ತಿಲ್ಲ. ಯಡಿಯೂರಪ್ಪನವರಿಗೆ ವಯಸ್ಸಾಗಿರಬಹುದು ಆದರೆ ಅವರ ಮಾನಸಿಕ ನಿರ್ಧಾರ ಗಳು ಧೃಡವಾಗಿವೆ ಎಂದರು.

ಇದನ್ನೂ ಓದಿ:ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸಿಎಂ ಬದಲಾವಣೆ ಮಾಡಬೇಕು: ವಿಶ್ವನಾಥ್

ಬಿಜೆಪಿಗೆ ಒಬ್ಬರೇ ವಿಶ್ವನಾಥ್ ಸಾಕಾಗಿತ್ತು, ಆದರೇನು ಮಾಡುವುದು, ಬೇರೆಯವರ ಜೊತೆ ಬಂದಾಗ ಬೇಡ ಎನ್ನಲಾಗುವುದಿಲ್ಲ. ಹೀಗಾಗಿ ಅವರನ್ನು ಪಕ್ಷಕ್ಕೆ ಕರೆದುಕೊಂಡು ತಪ್ಪಾಗಿದೆ ಎಂದು ವಾಗ್ದಾಳಿ ನಡೆಸಿದರು

Advertisement

Udayavani is now on Telegram. Click here to join our channel and stay updated with the latest news.

Next