Advertisement

ಕಾರ್ಕಳ:ಗುರಿ ತಪ್ಪಿದ ಗುಂಡಿಗೆ ವ್ಯಕ್ತಿ ಬಲಿ;ಬೇಟೆಗಾರರಿಬ್ಬರ ಬಂಧನ 

10:16 AM Jun 15, 2017 | |

ಕಾರ್ಕಳ: ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ಹಾರಿಸಿದ ಗುಂಡು‌ ಮರಕಡಿಯುತ್ತಿದ್ದ ವ್ಯಕ್ತಿ ಗೆ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಅಜೆಕಾರು ಕಡ್ತಲ ಮೀಸಲು ಅರಣ್ಯದಲ್ಲಿ ಬುಧವಾರ ತಡರಾತ್ರಿ ನಡೆಸಿದೆ.

Advertisement

ರವಿ ಎಂಬಾತ ಗುಂಡು ತಗಲಿ ಸಾವನ್ನಪ್ಪಿದ್ದು.ಸುಂದರ ನಾಯ್ಕ ಹಾಗೂ ಜೀತು ಎಂಬುವರು ಬಂಧಿತ ಅರೋಪಿಗಳಾಗಿದ್ದಾರೆ. 

ಮರಕಡಿಯಲು ಹೋಗಿದ್ದ ರವಿ ಮರಕಡಿಯುತ್ತಿದ್ದಾಗ ಶಿಕಾರಿಗೆ ಬಂದ ತಂಡವೊಂದನ್ನು ಗಮನಸಿ ಅರಣ್ಯಧಿಕಾರಿ ಎಂದು ಸ್ಥಳ ದಿಂದ ಓಡಿದಾಗ ಪ್ರಾಣಿ ಎಂದು ತಿಳಿದ ಶಿಕಾರಿ ತಂಡವು ಗುಂಡು ಹಾರಿಸದ ಪರಿಣಾಮ ಈ ಅವಘಡ ಸಂಭವಿಸಿದೆ.

ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next