Advertisement

ಹುಣಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕಿ ಚಿಕಿತ್ಸೆ ಫಲಿಸದೆ ಸಾವು

12:14 PM Jun 30, 2022 | Team Udayavani |

ಹುಣಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರತ್ನಪುರಿ ಗ್ರಂಥಾಲಯ ಮೇಲ್ವಿಚಾರಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Advertisement

ಗಾವಡಗೆರೆ ಗ್ರಾಮದ ಶ್ರೀನಾಥ್ ರಾವ್ ಬೋಬಡೆಯವರ ಪತ್ನಿ ರತ್ನಪುರಿ ಗ್ರಾಮದ ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ(43) ಮೃತಪಟ್ಟವರು.

ಮೃತರು ಪತಿ ಹಾಗೂ ಒಬ್ಬಳು ಮಗಳನ್ನು ಅಗಲಿದ್ದಾರೆ.

ಮಂಡ್ಯದಲ್ಲಿ ನಡೆದ ಗ್ರಾ.ಪಂ. ಗ್ರಂಥಪಾಲಕರ ಸಮಾವೇಶದಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದ ವೇಳೆ ಮೈಸೂರು- ಬಂಟ್ವಾಳ ಹೆದ್ದಾರಿಯ ಮಲ್ಲಿನಾಥಪುರದ ಬಳಿ ಜೂ.27 ರ ಮಂಗಳವಾರ ರಾತ್ರಿ ಟೆಂಪೋ ಟ್ರಾವಲರ್ – ಸಾರಿಗೆ ಸಂಸ್ಥೆ ಬಸ್ ನಡುವೆ ನಡೆದ ಅಪಘಾತದಲ್ಲಿ ಬನ್ನಿಕುಪ್ಪೆ ಗ್ರಾಮದ ಲೈಬ್ರರಿಯನ್ ನಾಗಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಜ್ಯೋತಿ ಹನಗೋಡಿನ ಯಶೋದಮ್ಮ ಸೇರಿದಂತೆ ಐವರಿಗೆ ತೀವ್ರ ಗಾಯವಾಗಿತ್ತು.

ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದರು.  ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದ್ದು, ಗಾವಡಗೆರೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Advertisement

ಹನಗೋಡು ಗ್ರಾಮದ ಲೈಬ್ರರಿಯನ್ ಯಶೋದಮ್ಮರವರ ಎರಡು ಕಾಲುಗಳಿಗೂ ತೀವ್ರ ಗಾಯವಾಗಿದ್ದು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next