Advertisement

ಹುಣಸೂರು: ಬಳೆ ವ್ಯಾಪಾರಿ, ಕೃಷಿಕ, ಅಡುಗೆಯವರ ಮಕ್ಕಳ ಸಾಧನೆ

11:59 AM Apr 22, 2023 | Team Udayavani |

ಹುಣಸೂರು: ಅಡುಗೆ ಕೆಲಸಗಾರನ ಮಗಳು, ರೈತನ ಮಗ, ವ್ಯಾಪಾರಿ ಪುತ್ರಿ ಈ ಬಾರಿಯ ಪಿಯು ಪರೀಕ್ಷೆಯ ಮೂರು ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ಈ ಬಾರಿಯ ವಿಶೇಷ.

Advertisement

ಹುಣಸೂರು ತಾಲೂಕಿನ ಬಿಳಿಗೆರೆ ಅನ್ವೇಷಣಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶ್ರೀರಕ್ಷಾ ಎಂ.ಎನ್‌. (579) ಅಂಕ, ವಾಣಿಜ್ಯ ವಿಭಾಗದಲ್ಲಿ ಹುಣಸೂರು ಶಾಸ್ತ್ರಿ ಕಾಲೇಜಿನ ಎಚ್‌.ಪಿ.ತ್ರಿಶಾ(583) ಅಂಕ, ಕಲಾ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಸುಮಂತ್‌ ಕೆ.ಟಿ (577)ಅಂಕ ಪಡೆದಿರುವ ಸಾಧಕರು. ವಿಜ್ಞಾನ ವಿಭಾಗದ ಶ್ರೀರಕ್ಷಾ ಎಂ.ಎನ್‌. ಕೆ.ಆರ್‌ .ನಗರದಲ್ಲಿ ಅಡುಗೆ ಕೆಲಸ ನಿರ್ವಹಿಸುವ ಎಂ.ಎಸ್‌ .ನಾಗರಾಜ್‌-ಉಷಾ ದಂಪತಿ ಪುತ್ರಿಯಾಗಿದ್ದು, ಎಂಜಿನಿಯರಿಂಗ್‌ ಓದುವ ಅಭಿಲಾಷೆ ವ್ಯಕ್ತಪಡಿಸಿದ್ದರೆ.

ಶಾಸ್ತ್ರಿ ಕಾಲೇಜಿನ ಎಚ್‌.ಪಿ.ತ್ರಿಶಾ ಹುಣಸೂರು ನಗರದ ಸೇತುವೆಯ ಶ್ರೀನಿಧಿ ಫ್ಯಾನ್ಸಿ ಸ್ಟೋರ್‌ನ ಮಾಲೀಕ ಎಚ್‌.ಎ.ಪ್ರದೀಪ್‌ ಕುಮಾರ್‌ -ಮಂಜುಳ ದಂಪತಿ ಪುತ್ರಿಯಾಗಿದ್ದು, ಮುಂದೆ ಬಿಬಿಎ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಕಲಾ ವಿಭಾಗದಲ್ಲಿ ಹುಣಸೂರಿನ ಸಂತಜೋಸೆಫರ ಪಿಯು ಕಾಲೇಜಿನ ಸುಮಂತ್‌ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರದ ರೈತ ತಿಮ್ಮಪ್ಪ-ರುಕ್ಮಿಣಿ ದಂಪತಿ ಪುತ್ರನಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತೇನೆಂದು ತಿಳಿಸಿದ್ದಾನೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next