Advertisement

“ವೀರಪ್ಪನ್‌-ಹಂಗರ್‌ಫಾರ್‌ ಕಿಲ್ಲಿಂಗ್‌’ವೆಬ್‌ಸೀರಿಸ್‌ ಬಿಡುಗಡೆ ತಡೆಯಾಜ್ಞೆ

04:05 PM Jan 13, 2021 | Team Udayavani |

ಬೆಂಗಳೂರು: ಕಾಡುಗಳ್ಳ ವೀರಪ್ಪನ್‌ ಚರಿತ್ರೆ ಆಧರಿಸಿ ನಿರ್ಮಿಸಿರುವ “ವೀರಪ್ಪನ್‌-ಹಂಗರ್‌ ಫಾರ್‌ ಕಿಲ್ಲಿಂಗ್‌’ ಹೆಸರಿನ ವೆಬ್‌
ಸೀರಿಸ್‌ ಯೂಟ್ಯೂಬ್‌ ಸೇರಿದಂತೆ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕೆ ತಡೆಯಾಜ್ಞೆ ನೀಡಿ ನಗರದ ಸಿಟಿ ಸಿವಿಲ್‌ ಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

Advertisement

ತಮ್ಮ ಪತಿ ವೀರಪ್ಪನ್‌ ಕುರಿತಾದ ವೆಬ್‌ ಸೀರಿಸ್‌ ನಿರ್ಮಿಸಲು, ಚಿತ್ರೀಕರಣ ನಡೆಸಲು , ನಿರ್ದೇಶಕ ಎಎಂಆರ್‌ ರಮೇಶ್‌ ತಮ್ಮಿಂದ
ಲಿಖೀತವಾಗಿ ಅನುಮತಿ ಅಥವಾ ಒಪ್ಪಿಗೆ ಪಡೆದಿಲ್ಲ. ಜತೆಗೆ ವೀರಪ್ಪನ್‌ ಒಬ್ಬ ನರ ಹಂತಕ ಮತ್ತು ಕಾಡುಗಳ್ಳ ಎಂಬುದಾಗಿ
ಚಿಬಿಂಬಿಸಲು ನಿರ್ದೇಶಕ ಎಎಂಆರ್‌ ರಮೇಶ್‌ ಉದ್ದೇಶಿಸಿದ್ದಾರೆ. ಇದ ರಿಂದ ತಮ್ಮ ವೈಯಕ್ತಿಕ ಮತ್ತು ಗೌಪ್ಯತೆ ಹಕ್ಕು  ಹರಣವಾಗ ಲಿದೆ ಎಂದು ಆಕ್ಷೇಪಿಸಿದ್ದ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮೀ ತಮ್ಮ ಪತಿಯ ಜೀವನ ಚರಿತ್ರೆ ಆಧರಿತ “ವೀರಪ್ಪನ್‌-ಹಂಗರ್‌ ಫಾರ್‌ ಕಿಲ್ಲಿಂಗ್‌’ ಹೆಸರಿನ ವೆಬ್‌ಸೀರಿಸ್‌ ಒಟಿಟಿ ವೇದಿಕೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡದಂತೆ ಆದೇಶಿಸಬೇಕು ಎಂದು ಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ:ದೆಹಲಿ ಗಡಿ: ನೂತನ ಕೃಷಿ ಕಾಯ್ದೆ ಪ್ರತಿ ಸುಡುವ ಮೂಲಕ ಲೋಹ್ರಿ ಹಬ್ಬ ಆಚರಿಸಿದ ರೈತರು

ಈ ಅರ್ಜಿ ವಿಚಾರಣೆ ನಡೆಸಿದ ನಗರದ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ವಾದ -ಪ್ರತಿವಾದ ಆಲಿಸಿ, “ವೀರಪ್ಪನ್‌-ಹಂಗರ್‌ ಫಾರ್‌ ಕಿಲ್ಲಿಂಗ್‌’ ವೆಬ್‌ ಸೀರಿಸ್‌ ಬಿಡುಗಡೆಗೆ ತಾತ್ಕಾಲಿಕ ನಿರ್ಬಂಧ ಹೇರಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next