ಸೀರಿಸ್ ಯೂಟ್ಯೂಬ್ ಸೇರಿದಂತೆ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕೆ ತಡೆಯಾಜ್ಞೆ ನೀಡಿ ನಗರದ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
Advertisement
ತಮ್ಮ ಪತಿ ವೀರಪ್ಪನ್ ಕುರಿತಾದ ವೆಬ್ ಸೀರಿಸ್ ನಿರ್ಮಿಸಲು, ಚಿತ್ರೀಕರಣ ನಡೆಸಲು , ನಿರ್ದೇಶಕ ಎಎಂಆರ್ ರಮೇಶ್ ತಮ್ಮಿಂದಲಿಖೀತವಾಗಿ ಅನುಮತಿ ಅಥವಾ ಒಪ್ಪಿಗೆ ಪಡೆದಿಲ್ಲ. ಜತೆಗೆ ವೀರಪ್ಪನ್ ಒಬ್ಬ ನರ ಹಂತಕ ಮತ್ತು ಕಾಡುಗಳ್ಳ ಎಂಬುದಾಗಿ
ಚಿಬಿಂಬಿಸಲು ನಿರ್ದೇಶಕ ಎಎಂಆರ್ ರಮೇಶ್ ಉದ್ದೇಶಿಸಿದ್ದಾರೆ. ಇದ ರಿಂದ ತಮ್ಮ ವೈಯಕ್ತಿಕ ಮತ್ತು ಗೌಪ್ಯತೆ ಹಕ್ಕು ಹರಣವಾಗ ಲಿದೆ ಎಂದು ಆಕ್ಷೇಪಿಸಿದ್ದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ತಮ್ಮ ಪತಿಯ ಜೀವನ ಚರಿತ್ರೆ ಆಧರಿತ “ವೀರಪ್ಪನ್-ಹಂಗರ್ ಫಾರ್ ಕಿಲ್ಲಿಂಗ್’ ಹೆಸರಿನ ವೆಬ್ಸೀರಿಸ್ ಒಟಿಟಿ ವೇದಿಕೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡದಂತೆ ಆದೇಶಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು.