Advertisement

ಮನೆ ಅಂಗಳದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ…ಜೀವ ಭಯದಲ್ಲಿ ಗ್ರಾಮಸ್ಥರು

07:49 PM Dec 13, 2022 | Team Udayavani |

ಹುಣಸೂರು: ರಾತ್ರಿ ಮಲಗಿದ್ದ ಮನೆ ಮಂದಿಗೆ ಬೆಳಗ್ಗೆ ಏಳುವಷ್ಟರಲ್ಲೇ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಇಡೀ ಗ್ರಾಮವೇ ಜೀವ ಕೈಯಲ್ಲಿ ಹಿಡಿದುಕೊಂಡು ಆಂತಕದಲ್ಲಿ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ತಾಲೂಕಿನ ನೇರಳಕುಪ್ಪೆಯಲ್ಲಿ ನಡೆದಿದೆ.

Advertisement

ನಾಗರಹೊಳೆ ಉದ್ಯಾನವನದಂಚಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಕಾಡಂಚಿನ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಯು ನೇರಳಕುಪ್ಪೆ ಗ್ರಾಮದ ಸುತ್ತೆಲ್ಲಾ ಓಡಾಡಿದ್ದು, ಸೋಮವಾರ ರಾತ್ರಿ ಮುದ್ದೆಗೌಡರ ಮನೆ ಅಂಗಳದಲ್ಲಿ ಹೆಜ್ಜೆ ಗುರುತು ಕಂಡು ಬಂದಿದೆ. ಇದರಿಂದ ಮನೆ ಮಂದಿ ಹಾಗೂ ಅಕ್ಕಪಕ್ಕದ ಮನೆಯವರಲ್ಲಿ ಭಯ ಆವರಿಸಿದ್ದು, ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹುಲಿ ಸೆರೆ ಹಿಡಿಯಲು ಆಗ್ರಹ:
ಹುಲಿಯು ಹನಗೋಡು ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಕಾಣಿಸಿಕೊಳ್ಳುತ್ತಿದ್ದು, ಹತ್ತಾರು ಆಡು, ಕುರಿ, ಹಸುಗಳನ್ನು ಬಲಿ ಪಡೆದಿದೆ. ಸಮಾರು ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಈ ಹುಲಿಯನ್ನು ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಎಚ್ಚರ ವಹಿಸಲು ಮನವಿ: ಅನಾವಶ್ಯಕವಾಗಿ ಒಬ್ಬರೇ ಓಡಾಡುವುದನ್ನು ಕಡಿಮೆ ಮಾಡುವಂತೆ ಹಾಗೂ ಸಾಕು ಪ್ರಾಣಿ, ರಾಸುಗಳನ್ನು ಮನೆಯ ಹೊರಗಡೆ ಕಟ್ಟದಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದು, ಸಾಕು ಪ್ರಾಣಿಗಳ ಕೂಗಾಡಿದ ವೇಳೆ ಒಮ್ಮೆಲೆ ಮನೆಯಿಂದ ಹೊರಬರದೆ ಕಿಟಕಿ ಮೂಲಕ ವೀಕ್ಷಿಸಿದ ನಂತರವಷ್ಟೆ ಹೊರಬರಲು ಹಾಗೂ ಹೆಜ್ಜೆ ಗುರುತು ಪತ್ತೆಯಾದ ತಕ್ಷಣವೇ ಸಿಬ್ಬಂದಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 2ನೇ ತರಗತಿ ವಿದ್ಯಾರ್ಥಿಗಳ ಹೊಡೆದಾಟ ಸಾವಿನಲ್ಲಿ ಅಂತ್ಯ: ಪೊಲೀಸರಿಂದ ವಿಚಾರಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next