Advertisement

ಹುಣಸೂರು: ಕಾರುಗಳ ಢಿಕ್ಕಿ ಮಾವ- ಅಳಿಯ ಸಾವು; ಮೂವರಿಗೆ ಗಾಯ

04:13 PM Jul 11, 2022 | Team Udayavani |

ಹುಣಸೂರು: ಎರಡು ಕಾರುಗಳ ನಡುವೆ ನಡೆದ ಮುಖಾ ಮುಖಿ ಢಿಕ್ಕಿಯಲ್ಲಿ ಮಾವ-ಅಳಿಯ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು- ಬಂಟ್ವಾಳ ಹೆದ್ದಾರಿ-275ರ ಹೊಸಲು ಮಾರಮ್ಮ ದೇವಸ್ಥಾನದ ಕ್ರಾಸ್ ನಲ್ಲಿ ನಡೆದಿದೆ.

Advertisement

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಕ್ಯಾಂಟಿನ್ ಮೋಹನ್( 56) ಹಾಗೂ ಅವರ ಅಳಿಯ ವಿನೋದ್ ಕುಮಾರ್ (26) ಸಾವನ್ನಪ್ಪಿದವರು.

ಮತ್ತೊಂದು ಕಾರಿನಲ್ಲಿದ್ದ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿದೆ.ಹುಣಸೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮೈಸೂರಿನಿಂದ ಬೈಲ ಕುಪ್ಪೆಗೆ ತೆರಳುತ್ತಿದ್ದ ಕಾರು ಹೆದ್ದಾರಿಯ ಬಿಳಿಕೆರೆ ಬಳಿಯ ಹೊಸಲು ಮಾರಮ್ಮ ದೇವಾಲಯದ ಬಳಿ ಕ್ರಾಸ್ ನಲ್ಲಿ ಮುಖಾ ಮುಖಿ ಢಿಕ್ಕಿಯಾಗಿ ಇಬ್ಬರು ತೀವ್ರಗಾಯಗೊಂಡು ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ವಿನೋದ್ ಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಸಾವನ್ನಪ್ಪಿದ್ದಾರೆ.

ಅಪಘಾತದಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿಗಳು ಅಪಘಾತಕ್ಕೀಡಾದ ಕಾರುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next