Advertisement

ಕುಂದಾಪುರ: ಗಾಯಾಳು ವ್ಯಕ್ತಿ ಸಾವು

12:43 AM Apr 07, 2024 | Team Udayavani |

ಕುಂದಾಪುರ: ಸ್ಕೂಟರ್‌ ಮತ್ತು ಮಿನಿ ಬಸ್‌ ನಡುವೆ ಕಳೆದ ರವಿವಾರ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ತಲ್ಲೂರು ಗರಡಿ ಸಮೀಪದ ನಿವಾಸಿ ಶೇಖರ್‌ ಪೂಜಾರಿ ಯಾನೆ ಚಂದ್ರಶೇಖರ್‌ ಪೂಜಾರಿ (52) ಅವರು ಎ. 6ರಂದು ಮೃತಪಟ್ಟರು.

Advertisement

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇವರು ಕೇಬಲ್‌ ಆಪರೇಟರ್‌ಆಗಿ ಕೆಲಸ ಮಾಡುತ್ತಿದ್ದರು. ಕಳೆದ ರವಿವಾರ ಅಪರಾಹ್ನ ತಲ್ಲೂರು ಸರ್ಕಲ್‌ ಬಳಿ ಶೇಖರ್‌ ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಮಿನಿ ಬಸ್‌ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಎ. 6ರಂದು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಕುಂದಾಪುರ: ವ್ಯಕ್ತಿ ಸಾವು
ಕುಂದಾಪುರ: ಸಂಗಮ್‌ ಜಂಕ್ಷನ್‌ ಬಳಿಯ ಬಸ್‌ ನಿಲ್ದಾಣದ ಶೆಡ್‌ನ‌ಲ್ಲಿ ಮಣಿಪಾಲ ಮಂಚಿಕೆರೆ ಗಂಗಾಧರ (ಅಂದಾಜು 55ರಿಂದ 60 ವರ್ಷ) ಅಸ್ವಸ್ಥಗೊಂಡು ಮಲಗಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕುಂದಾಪುರದ ವಿಠಲ ಅವರು 108 ಆ್ಯಂಬುಲೆನ್ಸ್‌ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.

Advertisement

ವಿಠಲ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಹಲ್ಲೆ, ನಿಂದನೆ: ದೂರು
ಕುಂದಾಪುರ: ಸೌಕೂರು ಚಿಕ್ಕಪೇಟೆ ನಂದಿಕೇಶ್ವರ ದೈವದ ಮನೆ ಹತ್ತಿರದ ಕ್ರಿಕೆಟ್‌ ಮೈದಾನದಲ್ಲಿದ್ದಾಗ ಆರೋಪಿಗಳಾದ ಬೋಳ್ಕಟ್ಟೆಯ ಸತೀಶ ಹಾಗೂ ದರ್ಶನ್‌ ಅವಾಚ್ಯ ಶಬ್ದದಿಂದ ನಿಂದಿಸಿ, ಬ್ಯಾಟ್‌ನಿಂದ ಹಲ್ಲೆ ಮಾಡಿರುವುದಾಗಿ ಗುಲ್ವಾಡಿಯ ಸಂಪತ್‌ ಕುಮಾರ್‌ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಸಂಪತ್‌ ಅವರನ್ನು ಸ್ನೇಹಿತರು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next