Advertisement

Road Mishap; ಕಾರು ಢಿಕ್ಕಿ; ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

01:07 AM Apr 02, 2024 | Team Udayavani |

ಸಿದ್ದಾಪುರ: ಬೈಂದೂರು ವಿರಾಜಪೇಟೆ ರಾಜ್ಯ ಹೆದ್ದಾರಿಯ ಹೈಕಾಡಿ ಹೊಗೆಬೇಳಾರ್‌ ಮುಡುವಳ್ಳಿ ಕ್ರಾಸ್‌ ಬಳಿ ವ್ಯಕ್ತಿಯೊಬ್ಬರು ಮಾ. 31ರಂದು ರಸ್ತೆಯ ಎಡಬದಿಯಿಂದ ಬಲಬದಿಗೆ ರಸ್ತೆ ದಾಟುವಾಗ ಹೈಕಾಡಿಯಿಂದ ಹಾಲಾಡಿ ಕಡೆಗೆ ಅತೀ ವೇಗವಾಗಿ ಬಂದ ಕೇರಳ ರಾಜ್ಯ ನೊಂದಾವಣೆಯ ಕಾರು ಢಿಕ್ಕಿ ಹೊಡೆದಿದೆ.

Advertisement

ಢಿಕ್ಕಿಯ ಪರಿಣಾಮ ತಟ್ಟುವಟ್ಟು ಮೇಲ್ಮನೆಯ ಸುರೇಂದ್ರ ನಾಯ್ಕ ಯಾನೆ ಸುರೇಶ ನಾಯ್ಕ (38) ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ತಲೆಗೆ ತೀವ್ರ ತರಹದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಶರೀರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಸುರೇಶ ನಾಯ್ಕ ಅವರು ಕೃಷಿ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿ ವಾಪಸು ಬರುವಾಗ ಅಪಘಾತ ನಡೆದಿದೆ. ಪತ್ನಿ ಹಾಗೂ ಸಣ್ಣ ಪ್ರಾಯದ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ನವೀನ್‌ ಕುಮಾರ ಶೆಟ್ಟಿ ಘಟನೆಯ ಕುರಿತು ಶಂಕರನಾರಾಯಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿ, ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

ಸುಗಮ ಸಂಚಾರಕ್ಕೆ ಸಹಕಾರ
ಹೊರ ರಾಜ್ಯದ ವಾಹನ ಅಪಘಾತದಲ್ಲಿ ಸ್ಥಳೀಯ ವ್ಯಕ್ತಿ ಮರಣ ಹೊಂದಿದ್ದರೂ, ಸ್ಥಳೀಯರು ಕಾರಿನಲ್ಲಿದ್ದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ರವಿವಾರ ರಜೆ ಪ್ರಯುಕ್ತ ರಾಜ್ಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದ ಸಮಸ್ಯೆಯಾಗದಂತೆ ವಾಹನಗಳ ಸುಗಮ ಸಂಚಾರಕ್ಕೆ ಸ್ಥಳೀಯರು, ಪೊಲೀಸರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next