Advertisement

ಶಾಸಕರ ಭರವಸೆ : 18 ನೇ ದಿನಕ್ಕೆ ರೈತರ ಧರಣಿ ಅಂತ್ಯ

07:47 PM Mar 03, 2022 | Team Udayavani |

ಹುನಗುಂದ : ತೊಗರಿ ಖರೀದಿ ಕೇಂದ್ರ ಪ್ರಾರಂಭ ಹಾಗೂ ಕಡಲೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹುನಗುಂದ ತಹಶಿಲ್ದಾರರ ಕಛೇರಿ ಮುಂದೆ ನಡೆಯುತ್ತಿದ್ದ ರೈತರ ಧರಣಿ ಶಾಸಕ ದೊಡ್ಡನಗೌಡ ಪಾಟೀಲ ಭರವಸೆಯೊಂದಿಗೆ 18 ನೇ ದಿನವಾದ ಗುರುವಾರ ಅಂತ್ಯಗೊಂಡಿದೆ..

Advertisement

ಪಟ್ಟಣದ ತಹಶಿಲ್ದಾರ ಕಛೇರಿ ಮುಂದೆ ನಡೆಯಿತ್ತಿದ್ದ ರೈತರ ಧರಣಿ ಸ್ಥಳಕ್ಕಾಮಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ, ಸರ್ಕಾರದ ಮಟ್ಟದಲ್ಲಿ ಸಚಿವರನ್ನು ಸಂಪರ್ಕಿಸಿ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು..

ರೈತ ಮುಖಂಡ ರಾಜು ಬಡಿಗೇರ ಮಾತನಾಡಿ, ಬೆಂಬಲ ಬೆಲೆ ಘೋಷಣೆ ಮಾಡದಿದ್ದರೂ ರೈತರಿಗೆ ಪರಿಹಾರ ಗೋಷಿಸುವಂತೆ ಆಗ್ರಹಿಸಿದರು..

ಧರಣಿ ಸತ್ಯಾಗ್ರಹದಲ್ಲಿ ರೈತ ಮುಖಂಡರಾದ ಗುರು ಗಾಣಿಗೇರ, ಅಮರೇಶ ನಾಗೂರ, ರಾಜು ಬಡಿಗೇರ, ಶಶಿಕಾಂತ ಬಂಡರಗಲ್,ಬಸವರಾಜ ಪೈಲ್ ಸೇರಿದಂತೆ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next