Advertisement

ಠಾಣೆಗಳಲ್ಲೇ ಮಾನವ ಹಕ್ಕು ಉಲ್ಲಂಘನೆ

11:58 PM Aug 08, 2021 | Team Udayavani |

ಹೊಸದಿಲ್ಲಿ: ಮಾನವ ಹಕ್ಕುಗಳು ನಿಯಮ ಅತಿ ಹೆಚ್ಚು ಉಲ್ಲಂಘನೆಯಾಗುತ್ತಿರುವುದು ಪೊಲೀಸ್‌ ಠಾಣೆಗಳಲ್ಲೇ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸಹಾಯಕ ಆ್ಯಪ್‌ ಬಿಡುಗಡೆ ಮಾಡಿ ಅವರು ಈ ಮಾತುಗಳನ್ನಾಡಿದ್ದಾರೆ. ಪೊಲೀಸ್‌ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಕೊರತೆಯಿಂದಾಗಿ ಈ ರೀತಿ ಆಗುತ್ತಿದೆ.

ಪ್ರತೀ ಪೊಲೀಸ್‌ ಠಾಣೆಯಲ್ಲಿ ನ್ಯಾಯಾಂಗದ ಕುರಿತಾಗಿ ಫ‌ಲಕಗಳನ್ನು ಹಾಕುವುದರಿಂದ ಇದು ಕಡಿಮೆಯಾಗಬಹುದು. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಬಡ ವರ್ಗದ ಜನರು ನಂಬಿಕೆ ಬೆಳೆಸಿಕೊಳ್ಳಬೇಕೆಂದರೆ ಮೊದಲು ಅದರ ಅಸ್ತಿತ್ವದ ಬಗ್ಗೆ ಅವರಲ್ಲಿ ಭರವಸೆ  ಮೂಡಿಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next