Advertisement

ಹುಬ್ಬಳ್ಳಿ: ‘ಅಮಿತ್ ಶಾ ಗೋ ಬ್ಯಾಕ್’ ಘೋಷಣೆ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

10:02 AM Jan 19, 2020 | keerthan |

ಹುಬ್ಬಳ್ಳಿ: ಪೌರತ್ವ ಕಾಯ್ದೆ ಪರವಾಗಿ ಸಮಾವೇಶದಲ್ಲಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದವರನ್ನು ವಶಕ್ಕೆ ಪಡೆಯಲಾಗಿದೆ.

Advertisement

ಪೌರತ್ವ ಕಾಯ್ದೆ ಮತ್ತು ಶಾ ಆಗಮನದ ವಿರುದ್ಧ ನಗರದ ಕೋರ್ಟ್ ವೃತ್ತದಲ್ಲಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಅಮಿತ್ ಶಾ ಗೋಬ್ಯಾಕ್ ಎಂದು ಘೋಷಣೆ ಕೂಗಿದರು. ಕೆಲಹೊತ್ತು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆ ನಡೆಸಿದ ವಿಜಯ ಗುಂಟ್ರಾಳ, ಅನ್ವರ ಮುಧೋಳ, ಅಶ್ರಫ ಅಲಿ, ದೇವಾನಂದ ಜಗಾಪುರ ಮೊದಲಾದವರಿದ್ದರು.

ಸಿಎಎ ವಿರೋಧಿಸಿ ಗಣೇಶ ಪೇಟೆ ಮುಕ್ಕೇರಿ ಓಣಿಯ ಕಟ್ಟಡದಿಂದ ಯುವಕರು ಕಪ್ಪುಬಣ್ಣದ ಗಾಳಿಪಟ ಮತ್ತು ಬಲೂನ್ ಹಾರಿಸಿದ ಘಟನೆಯೂ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕರು ತಲೆಮರೆಸಿಕೊಂಡರು. ಪೊಲೀಸರು ಕಟ್ಟಡದಲ್ಲಿದ್ದ ಗಾಳಿಪಟ, ಬಟ್ಟೆ ಹಾಗೂ ಅಕ್ಸಿನ್ ಬಾಟಲ್ ವಶ ಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next