Advertisement

ಹುಬ್ಬಳ್ಳಿ- ವಿಜಯಪುರ ಸಂಪರ್ಕ ಕಡಿತ ಸಾಧ್ಯತೆ

09:40 AM Sep 08, 2019 | Team Udayavani |

ನರಗುಂದ : ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ  ಹರಿಯುತ್ತಿರುವುದರಿಂದ ಹುಬ್ಬಳ್ಳಿ- ವಿಜಯಪುರ ಸಂಪರ್ಕ ಕಡಿತ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Advertisement

ಲಖಮಾಪುರ ಗ್ರಾಮವನ್ನು ನೀರು ಸುತ್ತುವರಿದ ಪರಿಣಾಮ  ಗ್ರಾಮದಿಂದ ಎಲ್ಲ ಜನರನ್ನು  ಹೊರಕ್ಕೆ ಕಳುಹಿಸಲಾಗಿದೆ. ಇಂದು 20 ಸಾವಿರ ಕ್ಯುಸೆಕ್ ವರೆಗೆ ನೀರು ಹರಿಬಿಡುವ ಸಾಧ್ಯತೆ ಇರುವುದರಿಂದ  ಈ ಗ್ರಾಮದ ಸಂಪರ್ಕ ಕಡಿತಗೊಳ್ಳುವ ಸಂಭವವಿದೆ.

ಗ್ರಾಮದ ಮುಖ್ಯರಸ್ತೆ, ಜಮೀನುಗಳಲ್ಲಿ ಟೆಂಟ್ ಹಾಕಿಕೊಂಡು ಗ್ರಾಮಸ್ಥರ ವಾಸ್ತವ್ಯ ಹೂಡಿರುವುದಾಗಿ ವರದಿ ತಿಳಿಸಿದೆ.

ಕೊಣ್ಣೂರು ಹೊಸ ಸೇತುವೆಯ ದುರಸ್ಥಿ ಮಾಡಲಾದ, ಸಂಪರ್ಕ ರಸ್ತೆಯ ಮಟ್ಟಕ್ಕೆ ನೀರು ಏರುತ್ತಿರುವ  ಪರಿಣಾಮ  ಸಂಜೆ ವೇಳೆಗೆ ಆ ಹೆದ್ದಾರಿ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next