Advertisement

ಹುಬ್ಬಳ್ಳಿ : ಕೊಲೆ ನಡೆದ 24 ತಾಸಿನೊಳಗೆ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

07:23 PM Nov 25, 2020 | sudhir |

ಹುಬ್ಬಳ್ಳಿ: ಅಂಚಟಗೇರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು 24 ತಾಸಿನೊಳಗೆ ಭೇದಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಪ್ರಕರಣದಲ್ಲಿ ಕಾಶಪ್ಪ ತಿಪ್ಪಣ್ಣವರ ಹಾಗೂ ಅಕ್ಷತಾ ಜೆ. ಕೊಲ್ಲಾಪುರ ಬಂಧಿತರಾಗಿದ್ದಾರೆ.

ಎದುರು-ಬದುರು ನಿವಾಸಿಗಳಾದ ಕಾಶಪ್ಪ ಮತ್ತು ಅಕ್ಷತಾ ನಡುವೆ ಅನೈತಿಕ ಸಂಬಂಧವಿತ್ತುಎನ್ನಲಾಗಿದ್ದು ಇದರಿಂದ ತಮಗೆ ಅಡ್ಡಿಯಾಗುತ್ತದೆ ಎಂದುಕೊಂಡು ಅಕ್ಷತಾಳು ತನ್ನ ಗಂಡನ ಕೊಲೆಗೆ ಸಂಚು ರೂಪಿಸಿ, ಪ್ರಿಯಕರನ ಮುಖಾಂತರ ಪತಿ ಜಗದೀಶ ಕೊಲ್ಲಾಪುರನನ್ನು ಕೊಲೆ ಮಾಡಿಸಿದ್ದಳು.

ಜಗದೀಶ ಮತ್ತು ಅಕ್ಷತಾ ದಂಪತಿಗೆ ನಾಲ್ಕು ತಿಂಗಳ ಮಗುವಿದೆ. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಪೊಲೀಸರು ಅಕ್ಷತಾ ಮತ್ತು ಕಾಶಪ್ಪನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:‌26/11 ದಾಳಿ ನಾಳೆಗೆ 12 ವರ್ಷ ಪೂರ್ಣ: ಗಣ್ಯರಿಂದ ಹುತಾತ್ಮರಿಗೆ ಗೌರವ ಸಮರ್ಪಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next