Advertisement
ಕಲಾಮಂದಿರದ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪೇವರ್ ಕಾರ್ಯ ಬಾಕಿಯಿದ್ದು, ಅದು ಪೂರ್ಣಗೊಂಡ ನಂತರ ಇನ್ನೊಂದು ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದರು.
Related Articles
ಡಾ| ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಆಸನಗಳ ವ್ಯವಸ್ಥೆ ಬದಲಾಯಿಸುವ ಕಾರ್ಯ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಭವನ ಸಿದ್ಧಗೊಳ್ಳಲಿದೆ. ಕನ್ನಡ ಭವನ ಬಂದ್ ಮಾಡಿ 3 ತಿಂಗಳು ಗತಿಸಿವೆ. ಕನ್ನಡ ಭವನ ಹಾಗೂ ಸವಾಯಿ ಗಂಧರ್ವ ಕಲಾ ಮಂದಿರದ ನಿರ್ವಹಣೆಗೆ ಸರಕಾರ ಆದ್ಯತೆ ನೀಡಬೇಕು ಎಂದು ಶೆಟ್ಟರ ಹೇಳಿದರು.
Advertisement
ಟೌನ್ ಹಾಲ್ 100 ವರ್ಷ ಹಳೆಯ ಕಟ್ಟಡವಾಗಿದ್ದು, ಅದು ಹುಬ್ಬಳ್ಳಿಯ ಹಳೆಯ ಕಟ್ಟಡಗಳಲ್ಲೊಂದಾಗಿದೆ. ಅದನ್ನು ನವೀಕರಿಸಲಾಗುವುದು ಎಂದು ತಿಳಿಸಿದರು. ಪಾಲಿಕೆಯ ಮಳಿಗೆಗಳನ್ನು ಸಬ್ಲೀಸ್ ನೀಡಿದ ಸಮೀಕ್ಷೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಸಭೆ ಕರೆದು ಸಬ್ಲೀಸ್ ಮಳಿಗೆಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಮಹಾಪೌರ ಸುಧೀರ ಸರಾಫ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಲಕ್ಷ್ಮೀ ಉಪ್ಪಾರ, ಉಮೇಶ ಕೌಜಗೇರಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಮೊದಲಾದವರಿದ್ದರು.