Advertisement

ಗೃಹಿಣಿ ಆತ್ಮಹತ್ಯೆ;ಕೊಲೆ ಎಂದು ಅತ್ತೆ-ಮಾವನಿಗೆ ಹಿಗ್ಗಾಮುಗ್ಗಾ ಥಳಿತ

11:29 AM Mar 28, 2018 | Team Udayavani |

ಬಾಗಲಕೋಟೆ: ನಗರದ ನವನಗರ ಸೆಕ್ಟರ್‌  ನಂಬರ್‌ 3 ರಲ್ಲಿ  26 ವರ್ಷದ ವಿವಾಹಿತೆಯ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ. 

Advertisement

ರೂಪಾ ಮಂಜುದಾಥ್‌ ಬೂದಿಹಾಳ ಎಂಬಾಕೆ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಆಕೆಯ ಪೋಷಕರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೆ ರೂಪಾ ಅತ್ತೆ  ಲಕ್ಷ್ಮವ್ವ  ಮತ್ತು ಮಾವ ನಾಗಪ್ಪಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯನ್ನೂ ತರಾತುರಿಯಲ್ಲಿ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ರೂಪಾ ಪೋಷಕರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. 

ನವನಗರ ಪೊಲೀಸರು ಸ್ಥಳಕ್ಕಾಗಮಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next