Advertisement

ಮನೆಗೆ ಬೆಂಕಿ; 5 ಲಕ್ಷ ರೂ. ಸೂತ್ತು ಹಾನಿ

10:35 PM Mar 09, 2023 | Team Udayavani |

ಕೈಕಂಬ: ಗುರುಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾರಮೊಗರು ಹೊಸಮನೆ ದೇವನಂದಿನಿ ಮಾರ್ಲ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು 5 ಲಕ್ಷ ರೂ. ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ.

Advertisement

ಬೆಂಕಿ ಸುಮಾರು ಬೆಳಗ್ಗೆ 9ರ ವೇಳೆಗೆ ತಗಲಿದ್ದು ಮನೆಯಲ್ಲಿ ಯಾರೂ ಇರಲಿಲ್ಲಿ. ಸಮೀಪದ ಮನೆಯವರು ಮನೆಗೆ ಛಾವಣಿಯಲ್ಲಿ ಹೊಗೆ ಬರುವುದನ್ನು ನೋಡಿ ಬೆಂಕಿ ಮನೆಗೆ ತಗಲಿದ್ದು ಗೊತ್ತಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್‌ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಗ್ರಾಮ ಪಂಚಾಯತ್‌ ಅಧ್ಯಕ್ಷ ಯಶವಂತ ಕುಮಾರ್‌ ಶೆಟ್ಟಿ, ಮೆಸ್ಕಾಂ ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ತಗಲಲು ಕಾರಣವೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next