Advertisement

ಬೈಕಾಡಿ: ಮನೆ ಬೆಂಕಿಗೆ ಆಹುತಿ

02:23 AM May 31, 2019 | sudhir |

ಬ್ರಹ್ಮಾವರ: ಬೈಕಾಡಿಯಲ್ಲಿ ಬುಧವಾರ ರಾತ್ರಿ ಹೂವಯ್ಯ ಶೆಟ್ಟಿ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಘಟನೆಗೆ ಶಾರ್ಟ್‌ ಸರ್ಕ್ನೂಟ್ನಿಂದ ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ.

Advertisement

ಘಟನೆಯಲ್ಲಿ ಪತ್ನಿ ವನಜಾ ಶೆಟ್ಟಿ ಗಾಯಗೊಂಡು ಆಸ್ಪತ್ರೆಗೆ ದಾಖ ಲಾಗಿದ್ದಾರೆ.

ಜತೆಗೆ ಹಟ್ಟಿಗೆ ಬೆಂಕಿ ಹತ್ತಿಕೊಂಡು ಹಸುಗಳಿಗೆ ಗಾಯಗಳಾಗಿವೆ. ಎಲೆ ಕ್ಟ್ರೋನಿಕ್ಸ್‌ ಉಪಕರಣಗಳು ಹಾಗೂ ಮನೆಯಲ್ಲಿ ಸಂಗ್ರಹಿಸಿದ್ದ ತೆಂಗಿನ ಕಾಯಿ ಬೆಂಕಿಗೆ ಆಹುತಿಯಾಗಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಸದಸ್ಯ ಚಂದ್ರಶೇಖರ್‌, ಪಿಡಿಒ ಆದರ್ಶ ಶೆಟ್ಟಿ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next