Advertisement
ವಿಶ್ವ ಪಾರ್ಶ್ವವಾಯು ಅರಿವು ದಿನಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಬಿಆರ್-ಲೈಪ್, ಎಸ್ಎಸ್ಎನ್ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ ಹೊರತಂದಿದ್ದ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು.
Related Articles
Advertisement
ರಕ್ತನಾಳದ ಅಸಹಜತೆ, ಆನುವಂಶಿಕ ಕಾರಣಗಳು, ಅಧಿಕ ರಕ್ತದೊತ್ತಡ, ನಿಯಂತ್ರಣಕ್ಕೆ ಬಾರದ ಮಧುಮೇಹ, ಹೈಪರ್ ಲಿಪಿಡೆಮಿಯಾ, ನಿದ್ರಾಹೀನತೆ, ಧೂಮಪಾನ, ಮದ್ಯಪಾನ, ಜಡತ್ವ ಹಾಗೂ ಒತ್ತಡದ ಜೀವನ ಶೈಲಿಯಿಂದಾಗಿ ಪಾರ್ಶ್ವವಾಯ ಹೆಚ್ಚಾಗಿ ಕಂಡುಬರುತ್ತಿದೆ. ಭಾರತದಲ್ಲಿ 18 ರಿಂದ 21 ದಶಲಕ್ಷ ಮಂದಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ. 25ರಿಂದ 30ರ ವಯೋಮಾನದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುವುದು ಆತಂಕದ ವಿಷಯ ಎಂದರು.
ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ, ಬಿಆರ್-ಲೈಪ್ ಗ್ರೂಪ್ನ ಸಿಇಒ ಕರ್ನಲ್ ಹೇಮ್ರಾಜ್ ಸಿಂಗ್ ಪರ್ಮಾರ್, ಸಂಸ್ಥೆಯ ಗ್ರೂಪ್ ಮೆಡಿಕಲ್ ಡೈರೆಕ್ಟರ್ ಡಾ.ಅಜಯ್ ರಾಜ್ ಮಲ್ಪೆ, ಬ್ರೈನ್ಸ್ ಸಂಸ್ಥೆಯ ಸಿಇಒ ಪ್ರಭಾಕರ್ ಇದ್ದರು.ಇದೆ ವೇಳೆ ಪಾರ್ಶ್ವವಾಯು ಸಮಸ್ಯೆ ನಿರ್ವಹಣೆಗೆ ಎಸ್ಎಸ್ಎನ್ಎಂಸಿ-ಬ್ರೈನ್ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರಕ್ಕೂ ಚಾಲನೆ ನೀಡಲಾಯಿತು.