Advertisement

ಡಾ|ತೇಲ್ತುಂಬ್ಡೆರನ್ನು ಶೀಘ್ರ ಬಿಡುಗೊಳಿಸಲು ಒತ್ತಾಯ

03:32 PM May 27, 2020 | Naveen |

ಹೊಸಪೇಟೆ: ಭೀಮಾ ಕೋರೆ ಗಾಂವ್‌ ಪ್ರಕರಣದಲ್ಲಿ ಸುಳ್ಳು ಆರೋಪದಡಿಯಲ್ಲಿ ಬಂಧಿಸಿರುವ ದಲಿತ ಚಿಂತಕ ಹಾಗೂ ಮಾನವ ಹಕ್ಕು ಪ್ರತಿಪಾದಕ ಡಾ| ಆನಂದ್‌ ತೇಲ್ತುಂಬ್ಡೆ ಕೂಡಲೇ ಬಿಡುಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ-ಕರ್ನಾಟಕ ತಾಲೂಕು ಸಮಿತಿಯ ಪದಾಧಿಕಾರಿಗಳು ನಗರದ ಉಪವಿಭಾಗಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

Advertisement

ಬೀಮಾ ಕೋರೆಗಾವ್‌ ಪ್ರಕರಣದಲ್ಲಿ ಸುಳ್ಳು ಆರೋಪದ ಮೇಲೆ ತೇಲ್ತುಂಬ್ಡೆ ಅವರನ್ನು ಬಂಧಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಹಕ್ಕಿದೆ. ಆದರೆ, ಕೇಂದ್ರ ಸರಕಾರ ಹೋರಾಟವನ್ನು ತಡೆಯಲು ಕಾನೂನನ್ನು ಬಳಸಿಕೊಳ್ಳುತ್ತಿದೆ. ಇದು ಅಪಾಯಕಾರಿಯಾಗಿದೆ. ಇದರ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ಪ್ರತಿಭಟನಾಕಾರರು ಡಾ| ಆನಂದ್‌ ತೇಲ್ತುಂಬ್ಡೆಯನ್ನು ಕೂಡಲೇ ಬಿಡುಗೊಳಿಸಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್‌ ಪ್ರತಿಭಾ ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು. ಮುಖಂಡರಾದ ಮರಡಿ ಜಂಬಯ್ಯನಾಯಕ, ಆರ್‌. ಭಾಸ್ಕರರೆಡ್ಡಿ, ಎಸ್‌.ಸತ್ಯಮೂರ್ತಿ, ಬಿ.ರಮೇಶಕುಮಾರ, ಬಿ.ತಾಯಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next