Advertisement

Hosanagar: ಭಾರೀ ಪ್ರಮಾಣದ ಧರೆ ಕುಸಿತ: ಹತ್ತಾರು ಗ್ರಾಮಗಳ ಸಂಪರ್ಕ ಕಡಿತ ಭೀತಿ

08:38 PM Jul 25, 2024 | Team Udayavani |

ಹೊಸನಗರ: ತಾಲೂಕಿನ ಮುತ್ತಲ ಸಂಪರ್ಕ ರಸ್ತೆಯ ಒಂದು ಬದಿಯ ಧರೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು ಗ್ರಾಮಗಳಿಗೆ ಸಂಪರ್ಕ ಭೀತಿ ಎದುರಾಗಿದೆ.

Advertisement

ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಕೋಡೂರು, ಕಾರಕ್ಕಿ, ಬುಲ್ಡೋಜರ್‌, ಮುತ್ತಲದ ಸಂಪರ್ಕ ರಸ್ತೆಯಾಗಿದ್ದು ನೂರಾರು ಕುಟುಂಬಗಳ ಸಂಪರ್ಕ ಕೊಂಡಿಯಾಗಿದೆ. ರಸ್ತೆ ಬಹುಪಾಲು ಹಾನಿಗೊಂಡಿದ್ದು ಯಾವುದೇ ಕ್ಷಣದಲ್ಲೂ ಸಂಪೂರ್ಣ ಸಂಪರ್ಕ ಕಡಿತಗೊಳ್ಳಲಿದೆ.

ಕಲಗೋಡು ಭೇಟಿ: ಜಿಪಂ ಮಾಜಿ ಅಧ್ಯಕ್ಷ, ಕಲಗೋಡು ರತ್ನಾಕರ್‌, ಬಳಿಕ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಶಶಿಧರ್‌ ಅವರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ಕ್ರಮಕ್ಕೆ ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಮೌಳಿ ಕೊಡೂರು, ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ರಾಜು, ಸದಸ್ಯರಾದ ಭದ್ರಪ್ಪಗೌಡ, ವೆಂಕಟಾಚಲ ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next