Advertisement

ಮುಳುಗಡೆಯಾದ ಹೊಸಮಠ ಸೇತುವೆ; ಈಗ ವಾಹನ ಸಂಚಾರ ಸುಗಮ

02:46 PM Jul 20, 2017 | |

ಕಡಬ: ಭಾರೀ ಮಳೆಯ ಕಾರಣ ಇಲ್ಲಿನ ಹೊಸಮಠ ಮುಳುಗು ಸೇತುವೆ ಗುರುವಾರ ನೆರೆ ನೀರಿನಿಂದ ಮುಳುಗಡೆಯಾಗಿ ಉಪ್ಪಿನಂಗಡಿ-ಕಡಬ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿದೆ.ಮಧ್ಯಾಹ್ನದ ವೇಳೆ ಮುಳುಗಡೆಯಾದ ಸೇತುವೆ 3 ಗಂಟೆಯ ವೇಳೆಗೆ ನೆರೆ ನೀರು ಇಳಿದ ಬಳಿಕ ಸಂಚಾರಕ್ಕೆ ಮುಕ್ತವಾಯಿತು. ಈಗ ವಾಹನ ಸಂಚಾರ ಸುಗಮವಾಗಿದೆ. 

Advertisement

ಕಡಬ ಭಾಗದಲ್ಲಿ ಮತ್ತು  ಘಟ್ಟದ ಮೇಲೆ  ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿ ಸೇತುವೆ ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿದು ವಾಹನ ಸಂಚಾರ ಸ್ಥಗಿತಗೊಂಡ ಕಾರಣ  ಪ್ರಯಾಣಿಕರು ಪರದಾಡುವಂತಾಯಿತು . ಮಳೆ ಪ್ರಮಾಣ ಹೆಚ್ಚಾದಲ್ಲಿ ಮತ್ತೆ ಸೇತುವೆ ಮುಳುಗಡೆಯಾಗುವ ಸಾಧ್ಯತೆಗಳಿವೆ. 

ಈ ಬಾರಿಯ ಮಳೆಗಾಲದಲ್ಲಿ ಸೇತುವೆ ಪ್ರಥಮ ಬಾರಿ ನೆರೆ ನೀರಿನಲ್ಲಿ ಮುಳುಗಡೆಯಾಗಿದೆ.

ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯದತ್ತ ತೆರಳುವವರು ಪರ್ಯಾಯ ಮಾರ್ಗ ಅವಲಂಬಿಸಬೇಕಾಯಿತು. ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ತೆರಳಿ ಇಚ್ಲಂಪಾಡಿ ಸೇತುವೆ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next