Advertisement
ಮಾರಮ್ಮ ದೇವಸ್ಥಾನದ ಮೇಲೆ ಜೀವಂತ ಕೋಳಿ ಎಸೆದು ಹರಕೆ ತೀರಿಸುವ ವಿಶಿಷ್ಠಜಾತ್ರೆಗಾಗಿ ದೇವಾಲಯದಲ್ಲಿ ದೇವಿಗೆ ಸೋಮವಾರ ಮುಂಜಾನೆಯಿಂದಲೇ ವಿವಿಧ ಪೂಜಾಕೈಂಕರ್ಯ ನಡೆದವು. ಆನಂತರ ಸಂಪ್ರದಾಯದಂತೆ ಮಲ್ಲಿನಾಥಪುರ ಗ್ರಾಮದಲ್ಲಿರುವ ಬೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನಾಭರಣ, ಕಡಗದೊಂದಿಗೆ ಶೃಂಗರಿಸಿ, ಬೆಳ್ಳಿಯ ಮುಖವಾಡ ಹಾಕಿ ಅಲಂಕರಿಸಿ 2 ಕಿ.ಮಿದೂರದ ದೇವಾಲಯಕ್ಕೆ ಮಲ್ಲಿನಾಥಪುರದಿಂದ ಬಿರುಬಿಸಿಲ ನಡುವೆಯೇ ಬರಿಗಾಲಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದವರಗೆ ಬಾಯಿಗೆ ಬೀಗಹಾಕಿದ್ದವರು, ದೇವರ ಅವಹಾಗಾನೆಗೆ ಒಳಗಾದ ಭಕ್ತರು ಕೊಂಬು, ಕಹಳೆ, ತಮಟೆ ಹಾಗೂ ಮಂಗಳ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾ ದಾರಿಯುದ್ದಕ್ಕೂ ಈಡುಗಾಯಿ ಒಡೆಯುತ್ತಾ ಜಾತ್ರಾಮಾಳಕ್ಕೆ ಆಗಮಿಸಿದರು. ಸುತ್ತಮುತ್ತಲಿನ ಏಳೂರಿನ ಜನರು ಮಾತ್ರ ಸಂಭ್ರಮದಿಂದ ಭಾಗವಹಿಸಿದ್ದರು.
Related Articles
Advertisement
ಏಳೂರಿನ ಗ್ರಾಮದೇವತೆ: ಹೊಸಲುಮಾರಮ್ಮ ದೇವಸ್ಥಾನ ಸುತ್ತ ಮುತ್ತಲಿನ ಏಳು ಗ್ರಾಮಕ್ಕೆ ಸೇರಿದ್ದಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಮಲ್ಲಿನಾಥಪುರ, ಬಿಳಿಕೆರೆ, ಬೋಳನಹಳ್ಳಿ-ರಾಮೇನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು, ಮೈದನಹಳ್ಳಿ, ರಾಮಸ್ಥರು ಸೇರಿ ದೇವಾಲಯದ ಆವರಣದ ಸುತ್ತಲಿನಲ್ಲಿರುವ ಮರದ ನೆರಳಲ್ಲಿ ನಿಂತು ದೇವರ ಮೆರವಣಿಗೆ ವೀಕ್ಷಿಸಿ, ದೆವಾಲಯದಲ್ಲಿ ಪೂಜೆ ಸಲ್ಲಿಸಿದರು. ಸಂಜೆ ಮತ್ತೆ ದೇವರಿಗೆ ಸಂಬಂಧಿಸಿದ ಒಡವೆ(ಭಂಡಾರ) ಆಯುಧಗಳು ಸೇರಿದಂತೆ ಎಲ್ಲವನ್ನೂ ಮೆರವಣಿಗೆಯಲ್ಲಿ ತಂದು ಗ್ರಾಮದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ವಸ್ಥಾನದಲ್ಲಿರಿಸಿದರು. ಯಜನಾನ್ರಾಜೇಗೌಡ, ಎಂ.ಎಸ್.ಸ್ವಾಮಿಗೌಡ, ಮುಖಂಡ ಸಣ್ಣಬೀರೇಗೌಡ, ಎಸ್.ಕುಮಾರ್, ಪೂಜಾರಿ ಹಾಲೇಗೌಡ, ಮಾದೇಗೌಡ, ಅರುಣ್ ಕುಮಾರ್, ನವೀನ್ ಮತ್ತಿತರರು ಜಾತ್ರಾಯಶಸ್ವಿಗಾಗಿ ದುಡಿದರು.
ದಣಿವಾರಿಸಿದ ಮಜ್ಜಿಗೆ: ಹುಣಸೂರಿನ ಶಾಸಕ ಎಚ್.ಪಿ.ಮಂಜುನಾಥ್ ನೇತೃತ್ವದ ಸ್ನೇಹಜೀವಿ ಸಂಸ್ಥೆವತಿಯಿಂದ ಜಾತ್ರೆಗಾಗಮಿಸಿದ್ದ ಭಕ್ತರಿಗೆ ಮಸಾಲೆ ಮಜ್ಜಿಗೆ ವಿತರಿಸಿ ದಣಿವಾರಿಸಿದರು. ಪೊಲೀಸ್ನಿರೀಕ್ಷಕ ರವಿಕುಮಾರ್ ನೇತೃತ್ವದಲ್ಲಿ ಪೋಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.
ಇಷ್ಟವರ್ಷ ಜಾತ್ರೆಯಲ್ಲಿ ಅಂಗಡಿ ಹಾಕಲು ಹರಾಜು ಕೂಗಿ ಜಾತ್ರಾಮಾಳದಲ್ಲಿ ಹಾಕವ ಅಂಗಡಿಗಳಿಂದ ಸುಂಕ ಎತ್ತಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಮುಜರಾಯಿ ಇಲಾಖೆ ಒಳಪಟ್ಟ ನಂತರ ಸುಂಕ ಎತ್ತುವುದಕ್ಕೆ ವಿನಾಯತಿ ನೀಡಲಾಗಿದೆ.