Advertisement

Hosadurga: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ನಿರಾಕರಿಸಿದ ವಧು!

11:30 PM Dec 08, 2023 | Team Udayavani |

ಹೊಸದುರ್ಗ: ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಬಲಗೈಯಿಂದ ತಾಳಿಯನ್ನು ತಳ್ಳಿದ ವಧು, ಮದುವೆಯನ್ನು ನಿರಾಕರಿಸಿದ ಘಟನೆ ಗುರುವಾರ ಚಿಕ್ಕಬ್ಯಾಲದಕೆರೆಯಲ್ಲಿ ನಡೆದಿದೆ.
ಬುಧವಾರ ಶಾಸ್ತ್ರೋಕ್ತವಾಗಿ ಆರತಕ್ಷತೆಯೂ ಅದ್ದೂರಿಯಾಗಿ ನಡೆದಿತ್ತು. ಗುರುವಾರ ಬೆಳಗ್ಗೆ ಹಲವು ಶಾಸ್ತ್ರಗಳೂ ನಡೆದಿದ್ದವು. ಆದರೆ ತಾಳಿ ಕಟ್ಟುವ ವೇಳೆ ಮದುಮಗಳು ಮದುವೆಯಾಗಲು ನಿರಾಕರಿಸಿದಳು.

Advertisement

ತಾಲೂಕಿನ ಚಿಕ್ಕಬ್ಯಾಲದಕೆರೆಯ ಮಂಜುನಾಥ್‌ ಮತ್ತು ಚಳ್ಳಕೆರೆಯ ಯಮುನಾ ಅವರ ವಿವಾಹವು ಚಿಕ್ಕಬ್ಯಾಲದಕೆರೆಯಲ್ಲಿ ನಡೆಯಲಿತ್ತು. ಒಂದು ವರ್ಷದಿಂದಲೂ ವಧು ಹಾಗೂ ವರನ ನಡುವೆ ಉತ್ತಮ ಒಡನಾಟವಿತ್ತು. ಯಮುನಾ ಓದುವ ನೆಪವೊಡ್ಡಿ ಮದುವೆ ಮುಂದೂಡಿದ್ದರು. ಬಳಿಕ ಒಪ್ಪಿಕೊಂಡಿದ್ದಳು. ಆದರೆ ಕೊನೇ ಕ್ಷಣದಲ್ಲಿ ಮದುವೆ ನಿರಾಕರಿಸಲು ಕಾರಣವೇನು ಎಂಬುದು ಗೊತ್ತಾಗಿಲ್ಲ.

ಮದುವೆ ನಿಂತಿರುವ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಆಗಮಿಸಿ ಮದುವೆ ವೆಚ್ಚವನ್ನು ವಧುವಿನ ಕಡೆಯವರು ಭರಿಸಬೇಕು ಎಂದು ರಾಜಿ ಸಂಧಾನ ಮಾಡಿ ಇತ್ಯರ್ಥಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next