Advertisement

Daily Horoscope: ಹಲವು ಬಗೆಯ ಗೊಂದಲಗಳ ಕಾಟವಾದರೂ ಬದುಕು ಸುಗಮ

08:22 AM Oct 12, 2023 | Team Udayavani |

ಮೇಷ: ಕಾರ್ಯ ವಿಳಂಬದಿಂದ ತಳಮಳ. ಉದ್ಯೋಗದಲ್ಲಿ ಸಾಮಾನ್ಯ ಮುನ್ನಡೆ. ಹೊಸ ಅವಕಾಶಗಳ ಅನ್ವೇಷಣೆ. ನಯವಂಚಕರ ಬಗ್ಗೆ ಎಚ್ಚರ. ವಚನ ಭಂಗವಾಗದಂತೆ ಎಚ್ಚರಿಕೆ ಇರಲಿ. ದೂರಪ್ರಯಾಣದ ಸಿದ್ಧತೆ. ಸ್ವಂತ ಉದ್ಯಮದಲ್ಲಿ ನೌಕರರ ಅಭಾವದ ಸಮಸ್ಯೆ. ವೃಷಭ: ಒಂದೇ ಕ್ಷೇತ್ರದಲ್ಲಿ ಲಕ್ಷ್ಯವಿಟ್ಟು ಪ್ರಯತ್ನಿಸಿದಲ್ಲಿ ಪ್ರಗತಿ ಸಾಧ್ಯ. ಕ್ಷಿಪ್ರ ಆದಾಯದ ಯೋಜನೆಗಳಿಂದ ತೊಂದರೆ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶದಿಂದ ಪರಿಸ್ಥಿತಿಯಲ್ಲಿ ವ್ಯತ್ಯಾಸ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಮಿಥುನ: ಹಲವು ಬಗೆಯ ಗೊಂದಲಗಳ ಕಾಟವಾದರೂ ಬದುಕು ಸುಗಮ. ಉದ್ಯೋಗದಲ್ಲಿ ಮುನ್ನಡೆ. ನಿಗದಿತ ಕಾರ್ಯಗಳು ನಿರಾತಂಕವಾಗಿ ಸಾಗುತ್ತವೆ. ಗಣೇಶನ ಪ್ರಾರ್ಥನೆಯಿಂದ ಕಾರ್ಯಗಳು ನಿರ್ವಿಘ್ನ. ಹೊಸ ಕ್ಷೇತ್ರಗಳ ಅರಸುವಿಕೆಯಲ್ಲಿ ಮುನ್ನಡೆ. ಕರ್ಕಾಟಕ: ಸ್ವಲ್ಪ ಮಟ್ಟಿಗೆ ಉಲ್ಲಾಸದ ವಾತಾವರಣದಲ್ಲಿ ಕಾಲ ಕಳೆಯುವಿರಿ. ಉದ್ಯೋಗ ಸ್ಥಾನದಲ್ಲಿ ಹರ್ಷ. ಸಹೋದ್ಯೋಗಿಗಳೊಂದಿಗೆ ಆರಾಮವಾಗಿ ಕಾಲ ಯಾಪನೆ. ಸ್ವಂತ ಉದ್ಯಮದ ವ್ಯಾಪ್ತಿ ಅನಾಯಾಸವಾಗಿ ವಿಸ್ತರಣೆ. ಉತ್ಪನ್ನಗಳ ಗ್ರಾಹಕ ವರ್ಗ ಬೆಳವಣಿಗೆ. ಸಿಂಹ: ದೊಡ್ಡ ಲಾಭ- ನಷ್ಟ ಎರಡೂ ಇಲ್ಲದ ದಿನ. ಉದ್ಯೋಗದಲ್ಲಿ ಸ್ಥೆçರ್ಯ. ಸ್ವಂತ ವ್ಯವಹಾರಕ್ಕೆ ಎದುರಾಗಿದ್ದ ಹಳೆಯ ಸಮಸ್ಯೆಗೆ ಮುಕ್ತಿ. ಆಡಳಿತಗಾರರಿಗೆ ನೌಕರರ ಸ್ವಯಂಪ್ರೇರಿತ ಸಹಾಯ. ಪಶುಪಾಲನೆ, ಹೈನುಗಾರಿಕೆ, ಖಾದಿ ಉದ್ಯಮದಲ್ಲಿ ಆಸಕ್ತರಿಗೆ ಲಾಭ. ಕನ್ಯಾ: ಧ್ಯಾನ, ಸತ್ಸಂಗ, ಸ್ವಾಧ್ಯಾಯಗಳಲ್ಲಿ ಆಸಕ್ತಿ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನದ ವಾತಾವರಣ. ಹೊಸ ಉತ್ಪನ್ನಗಳಿಗೆ ಬೇಡಿಕೆ. ಧಾರ್ಮಿಕ ಕ್ಷೇತ್ರದಲ್ಲಿ ಪ್ರವಚನ ಮಾಡುವ ಅವಕಾಶ. ಪ್ರಮುಖ ವ್ಯಕ್ತಿಯೊಬ್ಬರ ಅಕಸ್ಮಾತ್‌ ಪರಿಚಯದಿಂದ ಲಾಭ ವಾಹನ ಚಾಲನೆಯಲ್ಲಿ ಜಾಗೃತೆ. ತುಲಾ: ಜೀವನ ನಿರ್ವಹಣೆ ಸುಲಭ. ಸಂದಿಗ್ಧ ಪರಿಸ್ಥಿತಿಯಲ್ಲಿ ಅಪರಿಚಿತರಿಂದ ಸಹಾಯ. ಉದ್ಯೋಗದಲ್ಲಿ ಪರಸ್ಪರ ಸಹಕಾರ. ಮೇಲಿನವರಿಂದ ಶ್ಲಾಘನೆ. ದೂರದ ಬಂಧುಗಳ ಭೇಟಿ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆ. ವೃಶ್ಚಿಕ: ಮನೆಯಲ್ಲಿ ಸಂತಸದ ವಾತಾವರಣ. ಉದ್ಯೋಗಿಗಳು ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ. ಆಪ್ತರಿಂದ ಸಹಾಯ. ಹಿರಿಯರ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಚಿಂತಿತ ಕಾರ್ಯಗಳಲ್ಲಿ ಮುನ್ನಡೆ. ಮಕ್ಕಳಿಂದ ಶುಭ ಸಮಾಚಾರ. ಧನು: ಗೃಹ ನಿರ್ಮಾಣದ ಕನಸು ನನ ಸಾಗುವುದು. ಹಿರಿಯರ ಸಲಹೆ ಪಾಲಿಸಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿ. ಜಲಸಂಪನ್ಮೂಲ, ಸ್ವರ್ಣೋದ್ಯಮಿಗಳಿಗೆ ನಿರೀಕ್ಷಿತ ಆದಾಯ ಪ್ರಾಪ್ತಿ. ವೃತ್ತಿ ಕೌಶಲ ವೃತ್ತಿಯವರಿಗೆ ಅನುಕೂಲಕರ ವಾತಾವರಣ. ಮಕರ: ಗೃಹ ನಿರ್ಮಾಣದ ಕಾರ್ಯ ಮಂದಗತಿಯಲ್ಲಿ ಮುಂದುವರಿಕೆ. ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಾಲ ನೀಡು ವಾಗ ಯೋಚಿಸಿ ಮುಂದುವರಿಯಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಕುಂಭ: ಕುಟುಂಬದ ಕ್ಷೇಮ ಪಾಲನೆಯೊಂದಿಗೆ ಸಮಾಜದ ಋಣ ತೀರಿಸುವ ಕಾರ್ಯದಲ್ಲಿ ಮುಂಚೂಣಿಯ ಸೇವೆ. ಉದ್ಯೋಗ ಕ್ಷೇತ್ರದ ಸಾಧನೆಗಳಿಗಾಗಿ ಮೇಲಿನವರಿಂದ ಮತ್ತು ಸಹೋ ದ್ಯೋಗಿಗಳಿಂದ ಶ್ಲಾಘನೆ. ಸ್ವಂತ ಉದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಮೀನ: ನಿಗದಿತ ಸಮಯದ ಮೊದಲೇ ಕಾರ್ಯ ಪೂರೈಸಿದ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಯಶಸ್ಸು. ಸರಕಾರಿ ಕಚೇರಿಗಳಲ್ಲಿ ನೌಕರ ವರ್ಗದವರಿಂದ ಉತ್ತಮ ಸ್ಪಂದನ. ಕಟ್ಟಡ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಮುಂದುವರಿಕೆ. ಹೊಸ ಆಸ್ತಿ ಖರೀದಿ ಮಾತುಕತೆ ಮುಂದಕ್ಕೆ. ವ್ಯಾಪಾರ ಸ್ಥಾನ ನವೀಕರಣ ಕಾರ್ಯಕ್ಕೆ ತಾತ್ಕಾಲಿಕ ತಡೆ. ಆರೋಗ್ಯ ಉತ್ತಮ.

Advertisement
Advertisement

Udayavani is now on Telegram. Click here to join our channel and stay updated with the latest news.

Next