Advertisement

Daily Horoscope: ಮೇಲಧಿಕಾರಿಗಳಿಂದ ಪ್ರಶಂಸೆಯ ನುಡಿಗಳನ್ನು ಕೇಳುವಿರಿ

07:19 AM Oct 27, 2023 | Team Udayavani |

ಮೇಷ: ಶುಭ, ಅಶುಭಗಳ ಲೆಕ್ಕ ಹಾಕಿದರೆ ಶುಭಫ‌ಲಗಳ ಸಂಖ್ಯೆಯೇ ದೊಡ್ಡದು. ಉದ್ಯೋಗದಲ್ಲಿ ಅಪೂರ್ವ ಸಾಧನೆ ಮಾಡಿದ ಕೀರ್ತಿ ನಿಮ್ಮದಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಯ ನುಡಿಗಳನ್ನೂ ಕೇಳುವಿರಿ. ಉದ್ಯೋಗ ಬದಲಾವಣೆಯ ಯೋಚನೆ ಬೇಡ.

Advertisement

ವೃಷಭ: ಯೋಚಿಸಿ, ವಿಮರ್ಶಿಸಿ ಮುನ್ನಡೆಯಿರಿ. ಉದ್ಯೋಗದಲ್ಲಿ ತೃಪ್ತಿ ಏಕಕಾಲದಲ್ಲಿ.ಒಂದಕ್ಕಿಂತ ಹೆಚ್ಚು ಸಂಗತಿಗಳ ಮೇಲೆ ಶಕ್ತಿಯನ್ನು ಕೇಂದ್ರೀಕರಿಸುವ ಪ್ರಯತ್ನ ಬೇಡ. ಸದ್ಯ ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಮುಕ್ತಾಯಗೊಳಿಸಿ ಇನ್ನೊಂದಕ್ಕೆ ಕೈಹಾಕಿ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಮಿಥುನ: ಪ್ರಾಚೀನ ವಿದ್ಯೆಯ ಸಹಾಯದಿಂದ ಮಾನಸಿಕ ಸ್ಥೈರ್ಯ. ಉದ್ಯೋಗದಲ್ಲಿ ಸಾಮಾನ್ಯ ಸ್ಥಿತಿ. ಪ್ರತಿಭೆಗೆ ಸಾಧಾರಣ ಗೌರವ. ಸೇವಾ ಹಿರಿತನಕ್ಕೆ ಮಾನ್ಯತೆ. ಸ್ವಂತ ಉದ್ಯಮ ಆರ್ಥಿಕ ಮುಗ್ಗಟ್ಟು ಪರಿಹಾರಕ್ಕೆ ವಿತ್ತಸಂಸ್ಥೆ ನೆರವು. ಉತ್ಪಾದನೆಯ ಪ್ರಮಾಣ ಹೆಚ್ಚಳ.

ಕರ್ಕಾಟಕ: ಅನಿರೀಕ್ಷಿತ ಘಟನೆಗಳಿಂದ ಕಂಗೆಡ ದಿರಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸಹೋದ್ಯೋಗಿಗಳಿಂದ ನೆರವು. ಕೃಷ್ಯುತ್ಪನ್ನ ಮಾರಾಟದಿಂದ ಲಾಭ. ಹಳೆಯ ಬಂಧುಗಳ ಭೇಟಿ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ.

ಸಿಂಹ: ಅನಿರೀಕ್ಷಿತ ಧನಾಗಮ. ಉದ್ಯೋಗದಲ್ಲಿ ದಾಖಲೆಯ ಕಾರ್ಯನಿರ್ವಹಣೆ. ಸರಕಾರಿ ಅಧಿಕಾರಿಗಳಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ. ಸ್ವಂತ ಉದ್ಯಮದ ನೌಕರವರ್ಗಕ್ಕೆ ಹರ್ಷ.ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ವ್ಯವಹಾರ ವಿಸ್ತರಣೆಗೆ ವಿತ್ತ ಸಂಸ್ಥೆಗಳ ಸಕಾಲಿಕ ನೆರವು.

Advertisement

ಕನ್ಯಾ: ಒಂದೇ ಉದ್ಯೋಗದಲ್ಲಿ ಸ್ಥಿರವಾಗಿ ನಿಲ್ಲುವ ಪ್ರಯತ್ನ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉಪಕರಣ ವ್ಯಾಪಾರಿಗಳಿಗೆ ಹಾಗೂ ದುರಸ್ತಿ ಕಾರ್ಯ ತಜ್ಞರಿಗೆ ಉತ್ತಮ ಆದಾಯ. ಕಟ್ಟಡ ನಿರ್ಮಾಣ ಕಾರ್ಯ ವಿಳಂಬ. ಸಿವಿಲ್‌ ಎಂಜಿನಿಯರರಿಗೆ ಮಧ್ಯಮ ಆದಾಯ.

ತುಲಾ: ಅಳುಕದೆ ಮುಂದುವರಿಯಿರಿ. ಉದ್ಯೋಗದಲ್ಲಿ ಒಳ್ಳೆಯ ಹೆಸರು ಗಳಿಸುವ ಸಾಧ್ಯತೆ. ಸ್ವಂತ ಉದ್ಯಮ ಚಿಕ್ಕದಾಗಿದ್ದರೂ ಅಚ್ಚುಕಟ್ಟಿನಲ್ಲಿ ಮುಂದುವರಿಯಲು ಅವಕಾಶವಿದೆ. ನೌಕರ ವರ್ಗದ ಉತ್ತಮ ಸಹಕಾರವಿದೆ. ದೈವಾನುಗ್ರಹ ಪ್ರಾಪ್ತಿಗೆ ಸಾಧನೆ ಮುಂದುವರಿಕೆ.

ವೃಶ್ಚಿಕ: ಪಾಲಿಗೆ ಬಂದ ಭಾಗ್ಯಕ್ಕಾಗಿ ಸಂತೋಷ ಪಟ್ಟು ಮುಂದುವರಿಯಿರಿ. ಉದ್ಯೋಗದಲ್ಲಿ ಉನ್ನತಿ. ಸಣ್ಣ ಪ್ರಮಾಣದ ಸ್ವಂತ ಉದ್ಯಮದ ತೃಪ್ತಿಕರ ಬೆಳವಣಿಗೆ. ಪರಿಸರದ ನೈರ್ಮಲ್ಯ ಕಾಪಾಡುವ ಪ್ರಯತ್ನದಲ್ಲಿ ಕೈಜೋಡಿಸಿರಿ.

ಧನು: ಹಿತಶತ್ರುಗಳ ಬಾಧೆಯಿಂದ ಬಿಡುಗಡೆ. ಹಿತೈಷಿಗಳ ಸಹಕಾರ. ಉದ್ಯೋಗ ಸ್ಥಾನದಲ್ಲಿ ಪರಿಶ್ರಮಕ್ಕೆ ಗೌರವ. ಸಹೋದ್ಯೋಗಿಗಳಿಂದ ಪ್ರಶಂಸೆ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ದೇವತಾರ್ಚನೆಯಿಂದ ನೆಮ್ಮದಿ ಪ್ರಾಪ್ತಿ. ಕೃಷಿ ಕಾರ್ಯದಲ್ಲಿ ಪಾಲುಗೊಳ್ಳುವ ಪ್ರಯತ್ನದಲ್ಲಿ ಮುನ್ನಡೆ.

ಮಕರ: ಹೊಸ ಬಗೆಯ ಸಮಸ್ಯೆಗಳು ಎದುರಾಗು ತ್ತಿದ್ದರೂ ದೇವರ ದಯೆಯಿಂದ ಪಾರಾಗುವಿರಿ. ಹಿರಿಯರ ಆರೋಗ್ಯ ಮತ್ತು ಆಸಕ್ತಿಗಳ ಕಡೆಗೆ ಗಮ®. ಉದ್ಯೋಗ ಕ್ಷೇತ್ರದ ಒತ್ತಡ ಕ್ರಮವಾಗಿ ನಿವಾರಣೆ. ಲೆಕ್ಕ ಪರಿಶೋಧಕರು, ನ್ಯಾಯವಾದಿಗಳು ವೃತ್ತಿಪರರಿಗೆ ಸಮಯದೊಂದಿಗೆ ಹೋರಾಟದ ಆತಂಕ.

ಕುಂಭ: ಎಂದಿನಂತೆ ಸೇವಾ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಶ್ಲಾಘನಾರ್ಹ ಸಾಧನೆ. ಸ್ವಂತ ಉದ್ಯಮದ ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಹಿರಿಯ ಬಂಧುವಿನ ಸಹಾಯ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ದೂರದಲ್ಲಿರುವ ಬಂಧುಗಳ ಆಗಮನ.

ಮೀನ: ಶನಿಮಹಾತ್ಮನ ಅನುಗ್ರಹದಿಂದ ಸ್ಥಗಿತಗೊಂಡ ಕಾರ್ಯಗಳ ಮುಂದುವರಿಕೆ. ಉದ್ಯೋಗದಲ್ಲಿ ಯಶಸ್ಸು. ಸರಕಾರಿ ಅಧಿಕಾರಿಗಳು ಮತ್ತಷ್ಟು ನೌಕರರಿಂದ ಉತ್ತಮ ಸ್ಪಂದನ. ಗ್ರಾಹಕ ವರ್ಗಕ್ಕೆ ಹರ್ಷ. ಸೇವಾರೂಪದ ವೃತ್ತಿಯಲ್ಲಿ ಮುನ್ನಡೆ.ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಲು ಆಹ್ವಾನ. ಮಾತೃವರ್ಗದ ಸದಾಶಯದಿಂದ ಕಾರ್ಯಗಳಲ್ಲಿ ಜಯ.

Advertisement

Udayavani is now on Telegram. Click here to join our channel and stay updated with the latest news.

Next