Advertisement

Daily Horoscope: ಉದ್ಯೋಗದ ಸಮರ್ಪಕ ನಿರ್ವಹಣೆಗೆ ಮುಂದಾಗುವಿರಿ,ಉದ್ಯಮ ವಿಸ್ತರಣೆಗೆ ಚಿಂತನೆ

07:18 AM Nov 09, 2023 | Team Udayavani |

ಮೇಷ: ಬಹುವಿಧ ಚಟುವಟಿಕೆಗಳಲ್ಲಿ ಮಗ್ನರಾಗಿ ರುವ ನಿಮಗೆ ಒಂದೇ ಕ್ಷೇತ್ರದಲ್ಲಿ ಶ್ರಮವನ್ನು ಕೇಂದ್ರೀಕರಿಸುವುದರಿಂದ ನೂರಕ್ಕೆ ನೂರು ಯಶಸ್ಸು. ಹಳೆಯ ಸಮಸ್ಯೆ ಸುಲಭದಲ್ಲಿ ನಿವಾರಣೆ. ಉದ್ಯಮ ಅಭಿವೃದ್ಧಿಯ ವಿತ್ತ ಸಂಸ್ಥೆಯ ಪರ್ಯಾಪ್ತ ನೆರವು.

Advertisement

ವೃಷಭ: ನಿಧಾನಗತಿಯಲ್ಲಿ ಕಾರ್ಯ ಮುಂದುವರಿಸುವುದರಿಂದ ಯಶಸ್ಸು ಪ್ರಾಪ್ತಿ. ಹಿತಶತ್ರುಗಳ ಬಾಧೆಯಿಂದ ಪಾರಾಗುವ ಮಾರ್ಗವನ್ನು ಹುಡುಕಿ. ಉದ್ಯೋಗ ಸ್ಥಾನದಲ್ಲಿ ಗೌರವದ ನೆಲೆ.. ಉದ್ಯಮದಲ್ಲಿ ಪೈಪೋಟಿಯ ಸಮಸ್ಯೆ.

ಮಿಥುನ: ಸಂಸಾರದ ಸಂಬಂಧಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನ. ಉದ್ಯೋಗದ ಸಮರ್ಪಕ ನಿರ್ವಹಣೆಗೆ ಮುಂದಾಗುವಿರಿ. ಸ್ವಂತ ಉದ್ಯಮ ಉಳ್ಳವರಿಗೆ ನಿರ್ವಹಣೆಯ ಸಮಸ್ಯೆ. ಪಾಲುದಾರಿಕೆ ಉದ್ಯಮ ಅನುಕೂಲಕರ ಅಲ್ಲ.

ಕರ್ಕಾಟಕ: ಹೊಸ ಹೊಸ ಚಿಂತೆಗಳನ್ನು ಸೃಷ್ಟಿಸುವುದನ್ನು ಬಿಡಿ.ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಾರ್ಯತತ್ಪರತೆಗೆ ಶ್ಲಾಘನೆ. ಉದ್ಯಮ ವಿಸ್ತರಣೆಗೆ ಚಿಂತನೆ. ಸಂಸಾರ ನಿರ್ವಹಣೆ ಸುಗಮ. ಮನೆಗೆ ಬಂದ ನೆಂಟರಿಗೆ ಹರ್ಷ.

ಸಿಂಹ: ನಡೆದು ಬಂದ ದಾರಿಯ ಅವಲೋಕನ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮ ಇನ್ನಷ್ಟು ಮುನ್ನಡೆ. ನೌಕರ ವೃಂದಕ್ಕೆ ಸಂತೃಪ್ತಿ. ಸಾಹಿತ್ಯಾಸಕ್ತರಿಗೆ ಸಂತೋಷ. ಹೊಸ ವಿದ್ಯೆಯನ್ನು ಕಲಿಯುವ ಹುಮ್ಮಸ್ಸು. ಕುಟುಂಬ ಕಲಹ ಪರಿಹಾರ.

Advertisement

ನ್ಯಾ: ಬದುಕಿನ ಜಂಜಾಟಗಳ ನಡುವೆ ಆನಂದವನ್ನು ಅರಸುವ ಪ್ರಯತ್ನ.ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ನೆರವು. ತಳಮಳ ತೊಲಗಿಸಲು ಧ್ಯಾನ ಮಾರ್ಗದ ಅನುಸರಣೆ.

ತುಲಾ: ನೆಮ್ಮದಿ ಹುಡುಕುವ ಯತ್ನದಲ್ಲಿ ಯಶಸ್ವಿ ಯಾಗಿದ್ದೀರಿ.ಉದ್ಯೋಗದಲ್ಲಿ ಪ್ರತಿಭೆಗೆ ಗೌರವ ಸಲ್ಲಿಕೆ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಗೃಹೋಪಕರಣಗಳ ಖರೀದಿ. ದೇವತಾರ್ಚನೆಯಿಂದ ಇಷ್ಟಾರ್ಥ ಸಿದ್ಧಿಗೆ ಪ್ರಯತ್ನ.

ವೃಶ್ಚಿಕ: ಪಾಲಿಗೆ ಬಂದ ಪಂಚಾಮೃತವನ್ನು ಸವಿಯುವ ಆನಂದ. ಉದ್ಯೋಗದಲ್ಲಿ ವೇತನ ವೃದ್ಧಿ. ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆಗೆ ಹೊಸ ನೌಕರರ ಸೇರ್ಪಡೆ. ವೇತನ ವಿವಾದ ಪರಿಹಾರ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿಗಳ ವಿತರಕರಿಗೆ ಲಾಭ.

ಧನು: ನೋವುಗಳ ನಡುವೆ ನಲಿವಿನ ಅರಸು ವಿಕೆಯಲ್ಲಿ ಉಳಿದವರಿಗೆ ಮಾದರಿಯಾಗಿದ್ದೀರಿ. ಉದ್ಯೋಗಿಗಳಿಗೆ ಗುರುಸ್ಥಾನ ಪ್ರಾಪ್ತಿ. ಕೃಷಿಯಲ್ಲಿ ಹೊಸ ಪ್ರಯೋಗದಲ್ಲಿ ಯಶಸ್ವಿ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ಹತ್ತಿರದ ದೇವತಾ ಕ್ಷೇತ್ರಕ್ಕೆ ಶೀಘ್ರ ಭೇಟಿ.

ಮಕರ: ಪರರ ನೋವನ್ನು ಅರಿತುಕೊಂಡು ವ್ಯವಹರಿಸಿದರೆ ಎಲ್ಲರಿಗೂ ಮಾದರಿಯಾಗುವ ವ್ಯಕ್ತಿತ್ವ. ಉದ್ಯೋಗ ನಿರ್ವಹಣಾ ಸಾಮರ್ಥ್ಯಕ್ಕೆ ಮೇಲಧಿಕಾರಿ ಗಳ ಮೆಚ್ಚುಗೆ. ಸ್ವಂತ ಉದ್ಯಮ ವಿಸ್ತರಣೆಗೆ ಕಾನೂನಿನ ತೊಡಕು ನಿವಾರಣೆ. ಆಭರಣ ಖರೀದಿ.ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ.

ಕುಂಭ: ಶಾಕ್‌ ಅಬಾÕರ್ಬರಿನಂತೆ ಹೊಡೆತಗಳನ್ನು ತಾಳಿಕೊಳ್ಳುವ ಸಾಮರ್ಥ್ಯ. ಉದ್ಯೋಗದಲ್ಲಿ ದಿನ ಕ್ಕೊಂದು ಹೊಸ ಜವಾಬ್ದಾರಿ. ಸ್ವಂತ ಉದ್ಯಮ ನಿರಾತಂಕ ಬೆಳವಣಿಗೆ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ. ಮುದ್ರಣ ಸಾಮಗ್ರಿ, ಸ್ಟೇಶನರಿ ರಖಂ ವ್ಯವಹಾರಸ್ಥರಿಗೆ ಆದಾಯ ವೃದ್ಧಿ.

ಮೀನ: ಸಣ್ಣಪುಟ್ಟ ಸೋಲುಗಳಿಂದ ವಿಚಲಿತರಾಗದಿರಿ. ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಹಿರಿಯರ ಆಸ್ತಿ ಉಳಿಸಿ ಬೆಳೆಸಲು ದೈವಸಹಾಯ ಪ್ರಾಪ್ತಿ. ಸಣ್ಣ ಮಟ್ಟದಲ್ಲಿ ಕೃಷಿ ಆರಂಭಿಸಲು ಸಕಾಲ. ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ಆಸಕ್ತರಿಗೆ ಮಧ್ಯಮ ಲಾಭ.

Advertisement

Udayavani is now on Telegram. Click here to join our channel and stay updated with the latest news.

Next