Advertisement

ಸೋಮವಾರದ ರಾಶಿ ಫಲ; ಧನಾಗಮನಕ್ಕೆ ಸರಿಯಾಗಿ ವ್ಯಯವೂ ಸಂಭವ, ದೀರ್ಘ‌ ಪ್ರಯಾಣ

08:39 AM Nov 14, 2022 | Team Udayavani |

ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಮನೋರಂಜನೆ ಪ್ರದೇಶದಲ್ಲಿ ಆಹಾರ ಸೇವನೆಯಲ್ಲಿ ಮುಂಜಾಗ್ರತೆ ಅಗತ್ಯ ಬೇಕು. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಒತ್ತಡ. ಸಮಾಧಾನಕರ ಪರಿಸ್ಥಿತಿ. ಸಹೋದರ ಸಮಾನರಿಂದ ಸಹಕಾರ ಲಭ್ಯ.

Advertisement

ವೃಷಭ: ಗೃಹೋಪಯೋಗಿ ವಸ್ತುಗಳ ಸಂಗ್ರಹ. ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರತಿಫ‌ಲ. ದಾಂಪತ್ಯ ತೃಪ್ತಿದಾಯಕ. ಮಕ್ಕಳು, ಜ್ಞಾನ ವಿದ್ಯೆ ವಿಚಾರಗಳಲ್ಲಿ ಅಧಿಕ ಸಂತೋಷ.

ಮಿಥುನ: ಸರಿಯಾದ ಲೆಕ್ಕಾಚಾರದೊಂದಿಗೆ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಅನಗತ್ಯ ವಿಚಾರದಲ್ಲಿ ಪ್ರಗತಿ. ಸ್ತ್ರೀ ಪುರುಷರಿಗೆ ಪರಸ್ಪರರಿಂದ ಸಹಾಯ ಒದಗಿ ಬರುವುದು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ.

ಕರ್ಕ: ನಿರೀಕ್ಷಿಸಿದಂತೆ ಅಧಿಕ ಧನಾರ್ಜನೆ. ಸ್ಥಾನ ಗೌರವಾದಿ ಲಭ್ಯ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ತೃಪ್ತಿದಾಯಕ.

ಸಿಂಹ: ದೀರ್ಘ‌ ಪ್ರಯಾಣ. ಆರೋಗ್ಯ ಗಮನಿಸಿ. ಧನಾಗಮನಕ್ಕೆ ಸರಿಯಾಗಿ ವ್ಯಯವೂ ಸಂಭವ. ದಂಪತಿಗಳಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಮಕ್ಕಳಿಂದ ಸಂತೋಷ. ಜ್ಞಾನ ವಿದ್ಯೆಯಿಂದಲೂ ತೃಪ್ತಿ. ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ.

Advertisement

ಕನ್ಯಾ: ಅಧಿಕ ಪರಿಶ್ರಮ. ದೇಹಾಯಾಸ ಸಂಭವ. ಪೂರ್ವಾಪರ ತಿಳಿದು ಜವಾಬ್ದಾರಿ ಪಡೆದು ಕಾರ್ಯ ನಿರ್ವಹಿಸಿ. ಆಮಿಷಕ್ಕೆ ಒಳಗಾಗದಿರಿ. ಹಣಕಾಸಿನ ಕೊರತೆ ಆಗದು. ಗುರುಹಿರಿಯರ ಉತ್ತಮ ಸಹಕಾರ ಪ್ರಾಪ್ತಿ. ಸಂದಬೋìಚಿತ ಉಪಾಯದಿಂದ ಕೆಲಸ ಕಾರ್ಯಗಳಲ್ಲಿ ಜಯ.

ತುಲಾ: ಸರಿಯಾದ ಉತ್ತಮ ಆಲೋಚನೆ ಯೋಜನೆ ಅನುಷ್ಠಾನದಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಕಂಡು ಬರುವುದು. ಹೆಚ್ಚಿದ ಸ್ಥಾನಮಾನ ಗೌರವ ಆದರಗಳು. ಆರೋಗ್ಯ ವಿಚಾರದಲ್ಲಿ ಉದಾಸೀನತೆ ಮಾಡದಿರಿ.

ವೃಶ್ಚಿಕ: ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಖರ್ಚು ವೆಚ್ಚಗಳು ತೋರಿಬಂದಾವು. ಉತ್ತಮ ಜವಾಬ್ದಾರಿಯುತ ಮಾತು ಕಾರ್ಯ ವೈಖರಿಯಿಂದ ಜನಮನ್ನಣೆ ಗೌರವಾದಿ ಪ್ರಾಪ್ತಿ. ಗುರುಗಳು ಬಂಧು ಜನರಿಂದ ಉತ್ತಮ ಸಹಕಾರ.

ಧನು: ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ದೇವತಾ ಸಾನ್ನಿಧ್ಯ ಸಂದರ್ಶನ. ದೀರ್ಘ‌ ಪ್ರಯಾಣ. ಸ್ಥಿರವಾದ ನಾಯಕತ್ವ ಗುಣದಿಂದ ಸಮಾಜದಲ್ಲಿ ಮಾನ್ಯತೆ. ಆಸ್ತಿ ವಿಚಾರದಲ್ಲಿ ಪ್ರಗತಿ. ದೂರದ ಮಿತ್ರರ ಸಹಕಾರ ಪ್ರೋತ್ಸಾಹ. ಆರೋಗ್ಯ ಸುದೃಢ.

ಮಕರ: ಸಂಸಾರದೊಂದಿಗೆ ದೂರ ಪ್ರಯಾಣ. ಮಕ್ಕಳಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ದ್ವಂದ್ವ ನಿಲುವು ಸಲ್ಲದು. ಬಹು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಉತ್ತಮ ಧನಾರ್ಜನೆ. ಗುರುಹಿರಿಯರೊಂದಿಗೆ ಸಮಾದಾನದಿಂದಿರಿ.

ಕುಂಭ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ತಾಳ್ಮೆ ಸಹನೆ ಅಗತ್ಯ. ಅನಗತ್ಯ ಜವಾಬ್ದಾರಿಯಿಂದ ತೊಂದರೆ ಸಂಭವ. ದಾಕ್ಷಿಣ್ಯದ ಮಾತು ಬೇಡ. ನೇರ ನುಡಿಯಿಂದ ಅನುಕೂಲ ವಾತಾವರಣ. ಗೃಹೋಪಯೋಗಿ ವಸ್ತುಗಳಿಗೆ ಖರ್ಚು.

ಮೀನ: ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ. ದೂರದ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಧನಾಗಮನವಿರದು. ಬೇಸರ ಮಾಡದೇ ಕಾರ್ಯ ಪ್ರವೃತ್ತರಾಗಿ. ಪರರಿಗೆ ವಚನ ನೀಡುವಾಗ ಮುಂಜಾಗ್ರತೆ ಅಗತ್ಯ. ಅನ್ಯರ ಮೇಲೆ ಅವಲಂಬಿತರಾಗದೆ ಸ್ವಂತಿಕೆಯಿಂದ ಕಾರ್ಯ ಪ್ರವೃತ್ತರಾಗಿರಿ.

Advertisement

Udayavani is now on Telegram. Click here to join our channel and stay updated with the latest news.

Next