Advertisement

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ, ವ್ಯವಹಾರದಲ್ಲಿ ಜಯ

07:25 AM Mar 08, 2024 | Team Udayavani |

ಮೇಷ: ಅಧಿಕ ಲಾಭ ಗಳಿಕೆಯ ದಿನ. ಉದ್ಯೋಗ ಸ್ಥಾನದಲ್ಲಿ ಆನಂದಾನುಭವ. ಬಹುಪಾಲು ಉದ್ಯಮಿಗಳಿಗೆ ಅಧಿಕ ಲಾಭ. ಹೊಸ ವ್ಯವಹಾರಕ್ಕೆ ಬಂದಿದ್ದ ವಿಘ್ನಗಳು ದೂರ. ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ.

Advertisement

ವೃಷಭ: ಎಲ್ಲ ವ್ಯವಹಾರ ಕ್ಷೇತ್ರಗಳಲ್ಲೂ ಪ್ರಗತಿ. ಉದ್ಯೋಗಸ್ಥರಿಗೆ ಶೀಘ್ರ ಕಾರ್ಯ ಮುಗಿಸಲು ಒತ್ತಡ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪ್ರೋತ್ಸಾಹ.

ಮಿಥುನ: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ ಅವಶ್ಯ. ಧಾರ್ಮಿಕ ಸಾಹಿತ್ಯ ಅಧ್ಯಯನ. ಹಿರಿಯರ ಆರೋಗ್ಯ ಸುಧಾರಣೆ.

ಕರ್ಕಾಟಕ: ನಿಮ್ಮ ಕಾರ್ಯವೈಖರಿಯ ಕಾರಣದಿಂದ ಇನ್ನಷ್ಟು ಜವಾಬ್ದಾರಿಗಳು. ಉದ್ಯೋಗದಲ್ಲಿ ಹೊಸ ಕಾರ್ಯಗಳ ಜವಾಬ್ದಾರಿ. ಮಾಲಕರು ಮತ್ತು ನೌಕರರ ನಡುವೆ ಸಾಮರಸ್ಯ ವೃದ್ಧಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ ಸಂಭವ.

ಸಿಂಹ: ಎಲ್ಲ ವಿಭಾಗಗಳಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಣೆ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸೊದ್ಯೋಗಿ ಮಹಿಳೆಯರಿಗೆ ಸರ್ವವಿಧದಲ್ಲೂ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ. ಹತ್ತಿರದ ಶಿವಾಲಯಕ್ಕೆ ಸಂದರ್ಶನ.

Advertisement

ಕನ್ಯಾ: ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಉದ್ಯೋಗದಲ್ಲಿ ಪ್ರಾಮಾಣಿಕ ದುಡಿಮೆಗೆ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ.

ತುಲಾ: ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆಯ ಕಾಲ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಮಕ್ಕಳ ಆರೋಗ್ಯ ಉತ್ತಮ.

ವೃಶ್ಚಿಕ: ಅದೃಷ್ಟ ಒಲಿದ ಸಮಾಧಾನವಿರಲಿ. ವೈಯಕ್ತಿಕ ಬದುಕಿನಲ್ಲಿ ಎಲ್ಲ ಬಗೆಯ ಸಂತೃಪ್ತಿಯ ಅನುಭವ. ಉದ್ಯೋಗ, ವ್ಯವಹಾರ, ಎರಡರಲ್ಲೂ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಧನು: ಜೀವನದ ಭದ್ರತೆಯ ಬಗ್ಗೆ ಚಿಂತೆ ಬೇಡ. ಉದ್ಯೋಗ ಸ್ಥಾನದಲ್ಲಿ ಕಾರ್ಯಗಳು ಶೀಘ್ರಗತಿಯಲ್ಲಿ ಮುಂದುವರಿಕೆ. ಕೃಷ್ಯುತ್ಪನ್ನಗಳಿಂದ ಉತ್ತಮ ಲಾಭ. ದೂರದ ಬಂಧುಗಳ ಆಗಮನ ಸಂಭವ. ಕುಲದೇವರ ದರ್ಶನದಿಂದ ಸಮಾಧಾನ.

ಮಕರ: ನಿಯೋಜಿತ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿಕೆ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಟ್ಟಡ ನಿರ್ಮಾಪಕ ರಿಗೆ ಕಾರ್ಯ ಮುಗಿಸುವ ಒತ್ತಡ. ವಿದ್ಯುತ್‌ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ.

ಕುಂಭ: ಉದ್ಯಮದ ಉತ್ಪನ್ನಗಳಿಗೆ ಎÇÉೆಡೆ ಗಳಿಂದ ಬೇಡಿಕೆ. ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಹೆಚ್ಚಿದ ಜನಪ್ರಿಯತೆ. ಸಂಸಾರ ದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ಬೆಳವಣಿಗೆ. ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ.

ಮೀನ: ದೇವರ ದಯೆಯಿಂದ ಎಲ್ಲ ಕಾರ್ಯಗಳು ಅನಾಯಾಸ ವಾಗಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಮಕ್ಕಳ ಶಿಕ್ಷಣದಲ್ಲಿ ಗಣನೀಯ ಪ್ರಗತಿ. ಹಿರಿಯರಿಗೆ, ಸಂಗಾತಿಗೆ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next