Advertisement

Daily Horoscope: ಅವಿವಾಹಿತರಿಗೆ ಶೀಘ್ರ ವಿವಾಹ, ನೌಕರರಿಗೆ ನಿಶ್ಚಿಂತೆಯ ದಿನ

07:22 AM Mar 10, 2024 | Team Udayavani |

ಮೇಷ: ನಾಳೆಯ ಕೆಲಸಗಳ ಕುರಿತು ಯೋಚನೆ ಬೇಡ. ಇಡೀ ದಿನ ಕೆಲಸ ಕಾರ್ಯಗಳಲ್ಲಿ ಮಗ್ನತೆ. ಉದ್ಯಮ ಸಂಬಂಧಿ ವ್ಯವಹಾರಗಳ ಚಿಂತೆ. ಬಂಧುವರ್ಗದವರಿಂದ ಶುಭ ಸಮಾಚಾರ. ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿ.

Advertisement

ವೃಷಭ: ಅನೇಕ ಸಂತೋಷದ ಘಟನೆಗಳು ನಡೆಯುವ ದಿನ. ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಗೆ ಪ್ರಯತ್ನ. ಸೌಲಭ್ಯಗಳ ಹೆಚ್ಚಳದಿಂದ ನೌಕರರಿಗೆ ಹರ್ಷ. ವಿದೇಶದಲ್ಲಿರುವ ಬಂಧುಗಳೊಡನೆ ದೂರವಾಣಿ ಸಂಭಾಷಣೆ.

ಮಿಥುನ: ಭಗವಂತನಿಗೆ ಶರಣಾಗುವುದರಿಂದ ಸಮಸ್ಯೆಗಳಿಗೆ ಪರಿಹಾರ. ಧಾರ್ಮಿಕ ನಾಯಕರ ಭೇಟಿ. ಆಪ್ತರ ಮತ್ತು ಸಹೋದ್ಯೋಗಿಗಳ ಧೈರ್ಯ ತುಂಬುವ ಮಾತುಗಳು. ಸರಕಾರಿ ನೌಕರರಿಗೆ ನಿಶ್ಚಿಂತೆಯ ದಿನ. ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾಗಿ.

ಕರ್ಕಾಟಕ: ಸರಳ ನಡೆನುಡಿಗಳಿಂದ ಜನಪ್ರಿಯತೆ ವೃದ್ಧಿ. ಸಾಮಾಜಿಕ ರಂಗದ ಚಟುವಟಿಕೆಗಳಲ್ಲಿ ಆಸಕ್ತಿ. ಸಿವಿಲ್‌ ಎಂಜಿನಿಯರರಿಗೆ ಕೆಲಸದ ಒತ್ತಡ. ವಸ್ತ್ರ ಹಾಗೂ ಖಾದ್ಯವಸ್ತು ವ್ಯಾಪಾರಿ ಗಳಿಗೆ ಲಾಭ. ಊರಿನ ದೇವಾಲಯಕ್ಕೆ ಭೇಟಿ.

ಸಿಂಹ: ಅನಾಯಾಸವಾಗಿ ಕಾರ್ಯನಿರ್ವಹಣೆ. ವಿರಾಮದ ದಿನವಾದರೂ ಸಹಚರರನ್ನು ಕ್ರಿಯೆಯಲ್ಲಿ ತೊಡಗಿಸುವ ಹುಮ್ಮಸ್ಸು. ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.

Advertisement

ಕನ್ಯಾ: ಚಿತ್ತಚಾಂಚಲ್ಯದಿಂದ ಮುಕ್ತರಾಗಿರಿ. ಉದ್ಯೋಗ ಬದಲಾವಣೆ ಸಂಭವ. ಗೃಹ ನಿವೇಶನ ಅನ್ವೇಷಣೆ. ಪಶುಪಾಲನೆ, ಹೈನುಗಾರಿಕೆಯಿಂದ ಪ್ರಯೋಜನ. ದಂಪತಿಗಳ ನಡುವೆ ಸಾಮರಸ್ಯ ವೃದ್ಧಿ. ಎಲ್ಲರಿಗೂ ಆನಂದ, ಆರೋಗ್ಯಗಳ ಅನುಭವ.

ತುಲಾ: ಹಿರಿಯರಿಂದ ಸಕಾಲದಲ್ಲಿ ಧೈರ್ಯ ವಚನ.ಆಪ್ತಮಿತ್ರರ ಭೇಟಿಯಿಂದ ಸಮಾಧಾನ. ಭಾವನೆಗಳನ್ನು ಬರೆದಿಡುವುದರಿಂದ ಮನಸ್ಸು ಹಗುರ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆಗೈಯುವ ನಿರ್ಧಾರ. ಹೊಸ ಉದ್ಯಮ ಪ್ರಾರಂಭ.

ವೃಶ್ಚಿಕ: ಸುತ್ತಲಿನವರಿಗೆ ನಿಮ್ಮ ಬದುಕೇ ಮಾದರಿ. ಸೋದರಿಯ ಕುಟುಂಬಕ್ಕೆ ಸಕಾಲಿಕ ಸಹಾಯ. ಪಿತ್ರಾರ್ಜಿತ ಕೃಷಿಭೂಮಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ. ಹೊಸ ನಿವೇಶನ ಖರೀದಿ ಪ್ರಸ್ತಾವ.

ಧನು: ನಿರಂತರ ಕ್ರಿಯಾಶೀಲತೆಯೇ ಬದುಕಿಗೆ ಊರುಗೋಲು. ಪರೋಪಕಾರ ಗುಣದಿಂದ ಸಮಾಜದಲ್ಲಿ ಗೌರವದ ಸ್ಥಾನ. ಸಣ್ಣ ಉದ್ಯಮದಿಂದ ದೊಡ್ಡ ಯಶಸ್ಸು ಪ್ರಾಪ್ತಿ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ . ನೊಂದವರಿಗೆ ಸಾಂತ್ವನ.

ಮಕರ: ಕೌಟುಂಬಿಕ ಸಮಸ್ಯೆಗೆ ಶಾಶ್ವತ ಪರಿಹಾರ. ಉದ್ಯೋಗದ ಜಂಜಾಟಗಳಿಗೆ ವಿರಾಮ. ಹೊಸ ಉದ್ಯೋಗ ಅರಸುವ ಕಾರ್ಯ ಮುಂದುವರಿಕೆ. ಅಂಚೆ ಮೂಲಕ ಶಿಕ್ಷಣ ಪ್ರಗತಿಯಲ್ಲಿ. ತಾಯಿಯ ಕಡೆಯ ಬಂಧುಗಳ ಆಗಮನ.

ಕುಂಭ: ಹೊಸ ಬಗೆಯ ಸಣ್ಣ ಉದ್ಯಮ ಆರಂಭ. ಉದ್ಯಮದ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ. ಬರಬೇಕಾದ ಬಾಕಿ ವಸೂಲಿಯ ಚಿಂತೆ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಲಾಭ. ಮಕ್ಕಳ ಉದ್ಯಮ ಅಭಿವೃದ್ಧಿ.

ಮೀನ: ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ ಸಂತೃಪ್ತಿಯೊಂದಿಗೆ ವಿರಾಮ ಆಚರಣೆ. ಸಮಾಜದ ಹಿರಿಯರ ಸಮ್ಮಾನಕ್ಕೆ ಸಿದ್ಧತೆ. ಕೃಷಿಭೂಮಿಯಲ್ಲಿ ಹೊಸ ಪ್ರಯೋಗ ಸಣ್ಣ ಪ್ರಮಾಣದಲ್ಲಿ ಆರಂಭ. ಕುಟುಂಬದ ವ್ಯವಹಾರದ ಸಂಬಂಧ ದೂರ ಪ್ರಯಾಣ ಸಾಧ್ಯ. ಸಮಾಜ ಬಾಂಧವರ ಸಹಾಯದ ಕರೆಗೆ ಸ್ಪಂದನ.

Advertisement

Udayavani is now on Telegram. Click here to join our channel and stay updated with the latest news.

Next