Advertisement

Daily Horoscope: ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ಸು, ವ್ಯವಹಾರದಲ್ಲಿ ಉತ್ತಮ ಲಾಭ

07:32 AM Jul 22, 2024 | Team Udayavani |

ಮೇಷ: ಸಪ್ತಾಹ ಆರಂಭದಲ್ಲಿ ಉದ್ಯಮಿಗಳಿಗೆ ಶುಭ. ಉದ್ಯೋಗ ಸ್ಥಾನದಲ್ಲಿ ಸ್ಥಿರ ಅನುಭವ. ಕುಟುಂಬದಲ್ಲಿ ಶುಭಕಾರ್ಯದ ಸೂಚನೆ. ವ್ಯವಹಾರ ಸಂಬಂಧ ಸಣ್ಣ ತಿರುಗಾಟ. ಹಿರಿಯರು ಮತ್ತು ಗೃಹಿಣಿಯರಿಗೆ ಉಲ್ಲಾಸ.

Advertisement

ವೃಷಭ: ಉದ್ಯೋಗಾಪೇಕ್ಷಿಗಳಿಗೆ ಸದಾವಕಾಶ. ಹಿರಿಯರ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ವ್ಯಾಪಾರಿಗಳು, ಎಂಜಿನಿಯರ್‌, ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರಿಗೆ ಕೆಲಸ ಮುಗಿಸುವ ತರಾತುರಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ.

ಮಿಥುನ: ವಧೂ-ವರಾನ್ವೇಷಿಗಳಿಗೆ ಶುಭ ಸೂಚನೆ. ಷೇರು ವ್ಯವಹಾರದಲ್ಲಿ ಎಚ್ಚರ. ಸದ್ಗಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ವ್ಯವಹಾರ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ.

ಕರ್ಕಾಟಕ: ಮಿಶ್ರಫಲಗಳ ದಿನ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಮನೆಯಲ್ಲಿ ಉಳಿದ ಎಲ್ಲರ ಆರೋಗ್ಯ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ನೂತನ ವಾಹನ ಖರೀದಿಗೆ ಚಿಂತನೆ.

ಸಿಂಹ: ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ಸಿನ ಅನುಭವ. ಷೇರು ವ್ಯವಹಾರದಲ್ಲಿ ಉತ್ತಮ ಲಾಭ. ಕಾರ್ಯಗಳು ಶೀಘ್ರವಾಗಿ ಮುಕ್ತಾಯಗೊಳ್ಳಲು ಅಧಿಕಾರಿಗಳ ಸಹಾಯ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

Advertisement

ಕನ್ಯಾ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸೇವಾಮನೋಭಾವಕ್ಕೆ ಪ್ರಾಶಸ್ತ್ಯ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಲೇವಾದೇವಿ ವ್ಯವಹಾರದಲ್ಲಿ ಗೊಂದಲ. ಗುರುಸಮಾನರ ದರ್ಶನದ ಅವಕಾಶ.

ತುಲಾ: ತೋಟಗಾರಿಕೆ ಬೆಳೆಸಲು ಪ್ರಯತ್ನ. ಧಾರ್ಮಿಕ ಕ್ಷೇತ್ರಗಳ ದರ್ಶನ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ . ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ. ವಿದೇಶದಲ್ಲಿರುವ ಬಂಧು ಆಗಮನ.

ವೃಶ್ಚಿಕ: ಪರರ ಭಾವನೆಗೆ ಸ್ಪಂದಿಸುವುದರಿಂದ ಹಿತ. ವಸ್ತ, ಅಲಂಕಾರ ಸಾಮಗ್ರಿ ಖರೀದಿ ಸಂಭವ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹಿರಿಯರ ಆರೋಗ್ಯ ಗಮನಿಸಿರಿ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ.

ಧನು: ಉದ್ಯೋಗಸ್ಥರಿಗೆ ಅನುಕೂಲದ ದಿನ. ಉಳಿತಾಯ ಯೋಜನೆಗಳ ಏಜೆಂಟ ರಿಗೆ ಆದಾಯ ವೃದ್ಧಿ. ಪಾಲುದಾರಿಕೆ ವ್ಯವಹಾರ ದಲ್ಲಿ ಸಾಮಾನ್ಯ ಲಾಭ. ಗೃಹಿಣಿಯರ ಸ್ವೊದ್ಯೋಗ ಯೋಜನೆಗಳು ಕ್ಷಿಪ್ರಗತಿಯಲ್ಲಿ ಮುನ್ನಡೆ.

ಮಕರ: ವಿವಿಧ ಮೂಲಗಳಿಂದ ಆದಾಯ ವೃದ್ಧಿ. ಕಾರ್ಯರಂಗದಲ್ಲಿ ನಿಷ್ಠೆಗೆ ತಕ್ಕ ಪ್ರತಿಫಲ. ಮಕ್ಕಳ ಭವಿಷ್ಯ ಚಿಂತನೆ. ಲೇವಾದೇವಿ ವ್ಯವ ಹಾರಸ್ಥರಿಗೆ ನಷ್ಟ. ದ್ರವಪದಾರ್ಥ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕುಂಭ: ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ. ಸ್ಥಿರಾಸ್ತಿ ಖರೀದಿ ಪ್ರಯತ್ನ ಫಲಪ್ರದ. ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ಕುಟುಂಬದೊಳಗಿನ ವಿವಾದ ಮಾತುಕತೆಯ ಮೂಲಕ ಪರಿಹಾರ. ವ್ಯವಹಾರ ಸಂಬಂಧ ಪ್ರಯಾಣ ಮುಂದೂಡಿಕೆ.

ಮೀನ: ಸತ್ಕಾರ್ಯಗಳಲ್ಲಿ ಪಾಲುಗೊಳ್ಳುವ ಅವಕಾಶ. ಸರಕಾರಿ ಕಾರ್ಯಾಲಯದಲ್ಲಿ ಸಹಕಾರ. ಸಾಮೂಹಿಕ ಪ್ರಯತ್ನದಿಂದ ಕಾರ್ಯ ಯಶಸ್ವಿ. ದ್ರವ ವ್ಯಾಪಾರಿಗಳಿಗೆ ಶುಭಕಾಲ.ಸಾಂಸಾರಿಕ ಜೀವನದಲ್ಲಿ ಸೌಖ್ಯ.

Advertisement

Udayavani is now on Telegram. Click here to join our channel and stay updated with the latest news.

Next