Advertisement

ರಾಶಿ ಫಲ; ಎಲ್ಲರೂ ಶ್ಲಾಘಿಸುವಂತಹ ದಿನಚರಿ, ಅವಿವಾಹಿತರಿಗೆ ವಿವಾಹ ಭಾಗ್ಯ

07:16 AM Dec 31, 2022 | Team Udayavani |

ಮೇಷ: ಅಧ್ಯಯನಶೀಲರಿಗೆ, ಸರ್ಕಾರಿ ವೃತ್ತಿಪರರಿಗೆ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನವಾಗಿರುವುದು. ಅನಾಯಾಸ ಧನಾಗಮನ. ಗುರು ಹಿರಿಯರ ಉತ್ತಮ ಸಹಕಾರ. ಅವಿವಾಹಿತರಿಗೆ ಯೋಗ್ಯ ವಧು ವರ ಪ್ರಾಪ್ತಿ. ಉಲ್ಲಾಸಭರಿತ ಸಮಯ ಕಳೆಯುವಿಕೆ.

Advertisement

ವೃಷಭ: ಸತ್ಕಾರ್ಯಕ್ಕೆ ಧನವ್ಯಯ. ದಾಂಪತ್ಯ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಹೋದರಾದಿ ವರ್ಗದವರಿಂದ ಸುವಾರ್ತೆ. ಉದ್ಯೋಗ ವ್ಯವಹಾರದಲ್ಲಿ ಕೀರ್ತಿ ಸಂಪಾದನೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಫ‌ಲತೆ.

ಮಿಥುನ: ಉತ್ತಮ ಜನ ಸಂಪರ್ಕ. ಎಲ್ಲರೂ ಶ್ಲಾಘಿಸುವಂತಹ ದಿನಚರಿ. ಗೌರವ ಆದರಗಳು ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ ನಷ್ಟ ವಸ್ತುಗಳಿಗಾಗಿ ಪುನಃ ಪ್ರಯತ್ನಿಸಿದರು ಸಿಗುವ ಸಮಯ. ದಂಪತಿಗಳಲ್ಲಿ ಪರಸ್ಪರ ಪ್ರೀತಿ ಅನುರಾಗ ವೃದ್ಧಿ.

ಕರ್ಕ: ಉತ್ತಮ ಯೋಗ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಿಂದ ಕೀರ್ತಿ ಜನಮನ್ನಣೆ ಪ್ರಾಪ್ತಿ. ಆರೋಗ್ಯ ವೃದ್ಧಿ. ನಿರೀಕ್ಷಿತ ಧನ ಸಂಚಯನ. ಮಾತಿನಲ್ಲಿ ತಾಳ್ಮೆ ಪ್ರಮಾಣಿಕತೆ ಇರಲಿ. ಗುರು ಹಿರಿಯರಲ್ಲಿ ಭಯ ಭಕ್ತಿಯ ನಡವಳಿಕೆಯಿಂದ ಗೌರವ ಪ್ರಾಪ್ತಿ.

ಸಿಂಹ: ಆರೋಗ್ಯ ಗಮನಿಸಿ. ದೂರದ ವ್ಯವಹಾರ ನಿರ್ವಹಿಸುವಾಗ ಅನಗತ್ಯ ಖರ್ಚಿನ ಬಗ್ಗೆ ಗಮನಹರಿಸಿ. ಬಂಧು ಮಿತ್ರರ ಸಹಕಾರ. ಅಧ್ಯಯನದಲ್ಲಿ ಪ್ರಗತಿ. ಹೊಸ ಚಿಂತನೆಗಳಿಗೆ ಆದ್ಯತೆ. ದಾಂಪತ್ಯ ತೃಪ್ತಿಕರ.

Advertisement

ಕನ್ಯಾ: ಗೃಹ ವಾಹನ ಆಸ್ತಿ ವಿಚಾರಗಳಲ್ಲಿ ಸಂತೋಷ. ಹೂಡಿಕೆಗಳಲ್ಲಿ ಆಸಕ್ತಿ ಗೃಹ ಉಪಯೋಗಿ ಸಲಕರಣೆಗಳ ಖರೀದಿ. ಬಂಧು ಮಿತ್ರರ ಅವಲಂಬನೆ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲದಿಂದ ಮನಃತೃಪ್ತಿ.

ತುಲಾ: ಸಣ್ಣ ಪ್ರಯಾಣ. ಸಹೋದ್ಯೋಗಿ ಗಳಿಂದಲೂ ಸಹೋದರ ಸಮಾನರಿಂದಲೂ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿಯಿಂದ ಪ್ರಗತಿ ಮಾನ್ಯತೆ ಲಭ್ಯ. ಅವಿವಾಹಿತರಿಗೆ ವಿವಾಹ ಭಾಗ್ಯ. ಹಚ್ಚಿದ ವರಮಾನ.

ವೃಶ್ಚಿಕ: ಆರೋಗ್ಯ ಸುದೃಢ. ಎಲ್ಲಾ ವಿಧದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಪ್ರಗತಿ. ಉತ್ತಮ ಧನಲಾಭ. ಯೋಗ್ಯ ನೆಂಟಸ್ತಿಕೆ ಕೂಡಿ ಬರುವುದು. ಧಾರ್ಮಿಕ ಆಚರಣೆಗಳಲ್ಲಿ ಅಡಚಣೆ ತೋರಿ ಬರುವುದು. ಗುರು ಹಿರಿಯರ ಆರೋಗ್ಯ ಗಮನಿಸಿ.

ಧನು: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಜನ ಪ್ರಶಂಸೆ ಲಭಿಸುವುದು. ಮೇಲಧಿಕಾರಿಗಳ ಸಹಕಾರ ಮಾರ್ಗದರ್ಶನದ ಲಾಭ. ಅನೇಕ ಹೂಡಿಕೆಗಳಲ್ಲಿ ಆಸಕ್ತಿ ಹಾಗೂ ಕ್ರೀಯಾಶೀಲತೆ ಸಂಭವ. ಉತ್ತಮ ಧನಾರ್ಜನೆ. ಮಕ್ಕಳಿಂದ ಸ್ಥಾನ, ಗೌರವಕ್ಕಾಗಿ ಪರಿಶ್ರಮ.

ಮಕರ: ಕೆಲಸ ಕಾರ್ಯಗಳಲ್ಲಿ ನಿಷ್ಠೆ ಏಕಾಗ್ರತೆಯಿಂದ ಮೆಚ್ಚುಗೆ. ಸಂದರ್ಭೋಚಿತವಾದ ಯೋಜನೆ ಯೋಚನೆಯಿಂದ ಸಫ‌ಲತೆ. ಹಣಕಾಸಿನ ವಿಚಾರ ದಲ್ಲಿ ಆಯ ವ್ಯಯ ಸಮಾನವಾಗಿರುವುದು. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ

ಕುಂಭ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಜವಾಬ್ದಾರಿಯುತ ವಾಕ್‌ ಚತುರತೆಯಿಂದ ಅಧಿಕ ಧನಾಗಮನ. ದೂರದ ಮಿತ್ರರ ಸಲಹೆ ಸಹಕಾರದಿಂದ ಅಧಿಕ ಉಳಿತಾಯ ಸಂಭವ. ಭೂಮಿ ಆಸ್ತಿ ವಿಚಾರಗಳಲ್ಲಿ ಪಾರದರ್ಶಕತೆ ಅಗತ್ಯ.

ಮೀನ: ಗುರು ಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ಧನಲಾಭ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ಕಂಡುಬಂದರೂ ಜಯ ಸಾಧಿಸಿದ ಮನಃ ಸಮಾಧಾನ ಇರುವುದು. ಗೃಹೋಪಯೋಗಿ ವಸ್ತುಗಳ ಸಂಗ್ರಹ. ದಾಂಪತ್ಯ ಸುಖ ತೃಪ್ತಿದಾಯಕ.

Advertisement

Udayavani is now on Telegram. Click here to join our channel and stay updated with the latest news.

Next