Advertisement

Daily Horoscope: ದೀರ್ಘ‌ ಪ್ರಯಾಣ, ಅನಾವಶ್ಯಕ ಚರ್ಚೆಗೆ ಅವಕಾಶ ನೀಡದಿರಿ

07:09 AM Aug 01, 2023 | Team Udayavani |

ಮೇಷ: ಹಠ ಮಾಡದೆ ತಾಳ್ಮೆ ಸಹನೆಯಿಂದ ಕಾರ್ಯನಿರ್ವಹಿಸಿದ್ದರೆ ಸರ್ವಕಾರ್ಯಜನ ಕೀರ್ತಿ, ಪ್ರಶಂಸೆ. ಜವಾಬ್ದಾರಿಯ ನುಡಿಯಿಂದ ಜನಗೌರವ. ವಿದ್ಯಾರ್ಥಿಗಳಿಗೆ ಜ್ಞಾನವೃದ್ಧಿಗೆ ಧನವ್ಯಯ. ಆರೋಗ್ಯ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ.

Advertisement

ವೃಷಭ: ಅನವಶ್ಯಕ ವ್ಯವಹಾರಗಳಿಂದ ದೂರವಿರಿ. ದಾಕ್ಷಿಣ್ಯಕ್ಕೆ ಒಳಗಾಗದಿರಿ. ಜವಾಬ್ದಾರಿಯ ಮಾತುಗಳಿಂದ ಕಾರ್ಯದಲ್ಲಿ ಯಶಸ್ಸು. ದೂರದ ಮಿತ್ರರಿಂದ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ. ದಾಂಪತ್ಯ ತೃಪ್ತಿಕರ.

ಮಿಥುನ: ದೀರ್ಘ‌ ಪ್ರಯಾಣ. ಗುರು ಹಿರಿಯರಿಗೆ ಮುದ ನೀಡಿರಿ. ಅನಾವಶ್ಯಕ ಚರ್ಚೆಗೆ ಅವಕಾಶ ನೀಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ. ಗುರು ಹಿರಿಯರಿಗೆ ಉತ್ತಮ ಸ್ಥಾನ ಲಭಿಸಿ ಸಂತೋಷ.

ಕರ್ಕ: ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ. ದೇವತಾ ಸ್ಥಳಗಳ ಸಂದರ್ಶನ. ಅವಿವಾಹಿತರಿಗೆ ವಿವಾಹ ಭಾಗ್ಯ. ಯೋಗ್ಯ ಸಂಗಾತಿ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ. ಗುರು ಹಿರಿಯರಿಗೆ ಉತ್ತಮ ಸ್ಥಾನ.

ಸಿಂಹ: ಗೃಹ ವಾಹನಾದಿ ಸುಖ ವೃದ್ಧಿ. ನೂತನ ಬಂಧು ಮಿತ್ರರ ಸಂಗಮ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಜಾಣತನ. ಪ್ರಯೋಗದಿಂದ ಜನಮನ್ನಣೆ. ಉತ್ತಮ ಧನಾರ್ಜನೆ. ಧನ ಸದ್ವಿನಿಯೋಗ.

Advertisement

ಕನ್ಯಾ: ವ್ಯಾಪಾರ, ವ್ಯವಹಾರ, ಉದ್ಯೋಗದಲ್ಲಿ ವಿಶ್ವಾಸ ಕಾಯ್ದುಕೊಳ್ಳಿರಿ. ಪರರ ಹಣ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಲಿ. ಹಿಂಜರಿಯದೆ ಧೈರ್ಯದಿಂದ ಕೆಲಸ ಮಾಡಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮನೋರಂಜನೆ.

ತುಲಾ: ನಿರೀಕ್ಷಿತ ಸ್ಥಾನ ಗೌರವದಿಂದ ಹರ್ಷ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಮಕ್ಕಳಿಂದ ಸಂತೋಷ ವೃದ್ಧಿ. ಉತ್ತಮ ಗುಣನಡೆಯಿಂದ ಜನಾದರ. ಗೌರವ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗುರು ಹಿರಿಯರಿಂದ ಪ್ರೀತಿಯ ಸಹಕಾರ.

ವೃಶ್ಚಿಕ: ಆರೋಗ್ಯದ ಕಡೆಗೆ ಗಮನವಿರಲಿ. ದೈಹಿಕ ಶ್ರಮ, ಅಧಿಕ ಬುದ್ಧಿವಂತಿಕೆ ಚುರುಕುತನ ಪ್ರದರ್ಶನ. ಜನಾನುರಾಗಿ ವರ್ತನೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ದೂರದ ಮಿತ್ರರಿಂದ ಸಹಕಾರ.

ಧನು: ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರಿಗೆ ಸಂಭ್ರಮ. ದೂರದ ಮಿತ್ರರೊಂದಿಗೆ ಸಮಾಲೋಚನೆ. ದಂಪತಿಗಳಲ್ಲಿ ಪರಸ್ಪರ ಸಹಕಾರ. ಉತ್ತಮ ಸಂಪಾದನೆ. ಮನೆಯಲ್ಲಿ ಸಂತಸದ ವಾತಾರಣ.

ಮಕರ: ನಿರೀಕ್ಷಿತ ಧನಸಂಗ್ರಹ ವೃದ್ಧಿ. ಕಾರ್ಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅನಾವಶ್ಯಕ ಚರ್ಚೆಗೆ ಅವಕಾಶ ಕಲ್ಪಿಸದಿರಿ. ಅಧ್ಯಯನಕ್ಕೆ ಆದ್ಯತೆ. ನೂತನ ಮಿತ್ರರ ಭೇಟಿಯಿಂದ ಸಂತೋಷ.

ಕುಂಭ: ಮಕ್ಕಳಿಂದ ಸಂತೋಷ ವೃದ್ಧಿ. ವಿದ್ಯೆ ಜ್ಞಾನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಲಭ್ಯ. ಮೇಲಾಧಿಕಾರಿಗಳಿಂದ ಪ್ರೋತ್ಸಾಹ. ಧಾನಧರ್ಮ ಮಾಡಿದ ತೃಪ್ತಿ.

ಮೀನ: ಸಣ್ಣ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಪರಾಕ್ರಮ, ದೈರ್ಯ, ಶೌರ್ಯ ಪ್ರದರ್ಶನ. ಸಂಪತ್ಸಮೃದ್ಧಿ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ, ಗೌರವ, ಸುಖಾದಿ ಲಭ್ಯ. ದೂರದ ಮಿತ್ರದಿಂದ ಸಹಕಾರ ಲಭ್ಯ. ಗುರು ಹಿರಿಯರಲ್ಲಿ ಸಮಾಧಾನದಿಂದ ವರ್ತಿಸಿ.

Advertisement

Udayavani is now on Telegram. Click here to join our channel and stay updated with the latest news.

Next