Advertisement

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

07:12 AM May 01, 2024 | Team Udayavani |

ಮೇಷ:  ಗತ ಮಾಸದ ಸಾಧನೆಗಳ  ಸಿಂಹಾವ ಲೋಕನದಿಂದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ  ನಿಗದಿತ ಕೆಲಸಗಳು ಮುಕ್ತಾಯ. ಮಹಿಳೆಯರ  ಸ್ವಾವಲಂಬನೆ ಯೋಜನೆ ಮುನ್ನಡೆ. ಉದ್ಯಮದ  ನೌಕರರಿಗೆ ಹೊಸ ವ್ಯವಸ್ಥೆಯಿಂದ ಸಂತೋಷ.

Advertisement

ವೃಷಭ: ಮಾಸಾಂತ್ಯದಲ್ಲಿದ್ದ ದೊಡ್ಡ ಪ್ರಮಾಣದ ಪ್ರಗತಿಯ ನಿರೀಕ್ಷೆ  ಮುಂದು ವರಿಕೆ. ಕೃಷಿ ಕ್ಷೇತ್ರದ ಪ್ರಯೋಗಗಳು ಯಶಸ್ವಿ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫ‌ಲ. ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ.

ಮಿಥುನ: ಮನೆಯಲ್ಲಿ ಸಂತೋಷದ ವಾತಾವರಣ. ಧೈರ್ಯ, ಸಾಹಸದ ಪ್ರವೃತ್ತಿಯಿಂದ   ಕಾರ್ಯದಲ್ಲಿ ಮುನ್ನಡೆ. ಉದ್ಯೋಗದಲ್ಲಿ  ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ  ನೆರವು ಪ್ರಾಪ್ತಿ.

ಕರ್ಕಾಟಕ:  ಶೀಘ್ರ  ಉತ್ಕರ್ಷ ಹೊಂದುವ ಆಕಾಂಕ್ಷೆಗೆ ಪೋಷಣೆ. ಉದ್ಯೋಗದಲ್ಲಿ  ದಿನೇ ದಿನೇ ಉನ್ನತಿ. ಅಕಸ್ಮಾತ್‌ ಧನಾಗಮ ಯೋಗ.ಆಪ್ತಮಿತ್ರನಿಂದ  ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟ ದಿಂದ ಉತ್ತಮ ಲಾಭ.

ಸಿಂಹ: ಸಮೃದ್ಧವಾದ ಕಾರ್ಯಶಕ್ತಿಯೊಂದಿಗೆ  ರಂಗಪ್ರವೇಶ. ಉದ್ಯೋಗ ಕ್ಷೇತ್ರದಲ್ಲಿ ಅಗ್ರ ಸ್ಥಾನ. ಉದ್ಯಮಕ್ಕೆ ಸರ್ವತೋಮುಖ  ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿ  ಕಾರ್ಮಿಕರಿಗೆ ಅನುಕೂಲದ ವಾತಾವರಣ.

Advertisement

ಕನ್ಯಾ: ಪರಿಣತಿ ಹೊಂದಿರುವ ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ . ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಕುಟುಂಬದ ಹಿರಿಯ ವ್ಯಕ್ತಿಯಿಂದ ಸಹಾನುಭೂತಿಯ  ಸಹಕಾರ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ.

ತುಲಾ: ಡಾಂಭಿಕರ ಕಪಟ ನಾಟಕ ಜಯಿಸದು.ಉದ್ಯೋಗ ಸ್ಥಾನದಲ್ಲಿ ಯೋಗ್ಯತೆಗೆ ಸರಿ ಯಾದ ಗೌರವ ಪ್ರಾಪ್ತಿ. ಗುರುಸ್ಥಾನ ದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ.  ದೇವತಾ ಸಾನ್ನಿಧ್ಯ ದರ್ಶನ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಹರ್ಷ.

ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ ಮುಂದುವರಿಕೆ.  ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ  ಸ್ಥಿತಿ ಸುಧಾರಣೆ.

ಧನು: ಕಠಿನ ಮಾರ್ಗದಲ್ಲಿ ಸಂಪಾದನೆ ವೃದ್ಧಿ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ.. ಮಹಿಳೆಯರ ಉಸ್ತುವಾರಿಯ ಖಾದ್ಯಪದಾರ್ಥ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭ.

ಮಕರ: ಆತ್ಮವಿಶ್ವಾಸದೊಂದಿಗೆ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ  ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ  ಮಾರಾಟ ವೃದ್ಧಿ. ಪ್ರಾಪ್ತ ವಯಸ್ಕ ಕನ್ಯೆಯರಿಗೆ ವಿವಾಹ ಯೋಗ.

ಕುಂಭ: ಕುಗ್ಗದ ಹುರುಪಿನೊಂದಿಗೆ  ಹೊಸ ಮಾಸದ  ಕಾರ್ಯಾರಂಭ. ಉದ್ಯೋಗ ಸ್ಥಾನ ದಲ್ಲಿ ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಟೈಲರಿಂಗ್‌ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಉದ್ಯಮದ ಉತ್ಪನ್ನಗಳ ನಿರೀಕ್ಷೆ ಮೀರಿದ ಬೇಡಿಕೆ.

ಮೀನ: ಹೊಸ ತಿಂಗಳು ಬಂದೊಡನೆ   ಇನ್ನಷ್ಟು  ಕಾರ್ಯಗಳ  ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ. ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ  ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ. ಮನೆಯಲ್ಲಿ  ಸಂತಸದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next