Advertisement

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

07:21 AM Apr 13, 2024 | Team Udayavani |

ಮೇಷ: ವಾರಾಂತ್ಯ ಸಮೀಪಿಸುತ್ತಿದ್ದಂತೆ ಹಿನ್ನೋಟ ಬೀರಿ ಸಮಾಧಾನ. ಉದ್ಯಮದ ನೌಕರರಿಗೆ ಹೊಸ ವ್ಯವಸ್ಥೆಯಿಂದ ಸಂತೋಷ . ಮಹಿಳೆ ಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕೆಲಸಗಳು ಮುಕ್ತಾಯ.

Advertisement

ವೃಷಭ: ಆರಂಭದಲ್ಲಿದ್ದ ದೊಡ್ಡ ಪ್ರಮಾಣದ ಪ್ರಗತಿಯ ನಿರೀಕ್ಷೆ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದಿನ ಹಂತ ಆರಂಭ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫ‌ಲ.ಸತ್ಯ ಹೇಳಿ ನಿಷ್ಠುರಕ್ಕೆ ಗುರಿಯಾಗುವಿರಿ.

ಮಿಥುನ: ಪ್ರಾರಂಭದಲ್ಲಿದ್ದ ಧೈರ್ಯ, ಸಾಹಸದ ಪ್ರವೃತ್ತಿ ಕೊಂಚ ಕ್ಷೀಣಿಸಿದರೂ ಕಾರ್ಯದಲ್ಲಿ ಹಿಂದಿಲ್ಲ. ಉದ್ಯೋಗದಲ್ಲಿ ಜವಾಬ್ದಾರಿ ಗಳ ಸಮರ್ಥ ನಿರ್ವಹಣೆ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು ಪ್ರಾಪ್ತಿ.

ಕರ್ಕಾಟಕ: ಶೀಘ್ರ ಉತ್ಕರ್ಷ ಹೊಂದುವ ಆಕಾಂಕ್ಷೆಗೆ ಇಂಬು ಕೊಡುವ ಸನ್ನಿವೇಶ. ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಕುಟುಂಬದ ಹಿರಿಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ಅಕಸ್ಮಾತ್‌ ಧನಾಗಮ ಯೋಗ. ಆಪ್ತಮಿತ್ರನಿಂದ ಶುಭವಾರ್ತೆ.

ಸಿಂಹ: ಶುಭ ಶನಿವಾರದಂದು ಸಮೃದ್ಧವಾದ ಕಾರ್ಯಶಕ್ತಿಯೊಂದಿಗೆ ರಂಗಪ್ರವೇಶ. ಉದ್ಯೋಗ ಕ್ಷೇತ್ರದಲ್ಲಿ ಅಗ್ರಪಂಕ್ತಿಯ ಸ್ಥಾನಮಾನ. ಎÇÉೆಯಿಲ್ಲದ ಉದ್ಯಮದ ಪ್ರಗತಿ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ.

Advertisement

ಕನ್ಯಾ: ಪರಿಣತಿ ಹೊಂದಿರುವ ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಕುಟುಂಬದ ಹಿರಿಯ ವ್ಯಕ್ತಿಯಿಂದ ಸಹಾನುಭೂತಿಯ ಸಹಕಾರ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಪೂರಕ ವಾತಾವರಣ.

ತುಲಾ: ಆಡಂಬರ ಪ್ರದರ್ಶಿಸುವವರೆದುರು ಅಳುಕಬೇಡಿ. ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ.

ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಪಾಲನೆಗೆ ಚ್ಯುತಿಯಿಲ್ಲ. ಉದ್ಯೋಗ ಸ್ಥಾನ ದಲ್ಲಿ ಯಥಾಸ್ಥಿತಿ ಮುಂದುವರಿಕೆ. ಉದ್ಯಮಿಗಳಿಗೆ ಎದುರಾಳಿಗಳಿಂದ ಹೊಸ ಬಗೆಯ ಪೈಪೋಟಿ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ.

ಧನು: ಛಲದಿಂದ ಕಂಡುಕೊಂಡ ಸಂಪಾದನೆಯ ಮಾರ್ಗದ ಕುರಿತು ತೃಪ್ತಿ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ . ಮಹಿಳೆಯರ ಉಸ್ತುವಾರಿಯ ಖಾದ್ಯ ಪದಾರ್ಥಗಳ ಘಟಕಕ್ಕೆ ದಾಖಲೆಯ ಪ್ರಮಾಣದಲ್ಲಿ ಲಾಭ.

ಮಕರ: ವೃತ್ತಿಯಲ್ಲಿ ಪರಿಣತಿ ಹೆಚ್ಚಿಸಿಕೊಂಡ ಕಾರಣ ಇಮ್ಮಡಿಯಾದ ಆತ್ಮವಿಶ್ವಾಸ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಗುಣಮಟ್ಟ ಸುಧಾರಣೆಯಿಂದಾಗಿ ಮಾರಾಟ ವೃದ್ಧಿ.

ಕುಂಭ: ವಾರಂತ್ಯದ ಮುನ್ನಾದಿನ ಕುಗ್ಗದ ಹುರುಪಿನೊಂದಿಗೆ ಕಾರ್ಯರಂಗಕ್ಕೆ ಪ್ರವೇಶ. ಟೈಲರಿಂಗ್‌ ವೃತ್ತಿ ಬಲ್ಲವರಿಗೆ ಉದ್ಯೋಗಾವ ಕಾಶ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಮಾರುಕಟ್ಟೆ ಜಾಲ ವಿಸ್ತರಣೆ. ಆಯೋಜಿತ ಸೇವಾ ಕಾರ್ಯಗಳಲ್ಲಿ ಭಾಗಿ.

ಮೀನ: ಸಪ್ತಾಹ ಮುಗಿಯುತ್ತಾ ಬಂದಂತೆ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳ ಕಡೆಗೆ ಗಮನಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.

Advertisement

Udayavani is now on Telegram. Click here to join our channel and stay updated with the latest news.

Next