Advertisement

ಕರ್ಕಶ ಹಾರ್ನ್: 112 ಕೇಸು ದಾಖಲು

04:44 AM Feb 17, 2019 | Team Udayavani |

ಮಂಗಳೂರು: ಬಸ್ಸುಗಳ ಕರ್ಕಶ ಹಾರ್ನ್ ವಿರುದ್ಧ  ಟ್ರಾಫಿಕ್‌ ಪೊಲೀಸರು ಶನಿವಾರ ಕಾರ್ಯಾಚರಣೆ ನಡೆಸಿದ್ದು,  90 ಹಾರ್ನ್ಗ ಳನ್ನು ಕಳಚಿ 112 ಪ್ರಕರಣ ದಾಖಲಿಸಿ 11,100 ರೂ. ದಂಡ ವಿಧಿಸಿದ್ದಾರೆ. 

Advertisement

ಡಿಸಿಪಿ ಉಮಾ ಪ್ರಶಾಂತ್‌, ಎಸಿಪಿ ಮಂಜುನಾಥ ಶೆಟ್ಟಿ  ಹಾಗೂ ಟ್ರಾಫಿಕ್‌ ಪೊಲೀಸ್‌ ಸಿಬಂದಿ ಈ ಕಾರ್ಯಾಚರಣೆ ನಡೆಸಿದರು. ಸಂಚಾರ ವಿಭಾಗದ ಪಶ್ಚಿಮ, ಪೂರ್ವ, ದಕ್ಷಿಣ ಮತ್ತು ಉತ್ತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ  ಕಾರ್ಯಾಚರಣೆ ನಡೆಯಿತು. 

ಕರ್ಕಶ ಹಾರ್ನ್ ವಿರುದ್ಧ ಈ ಹಿಂದೆಯೂ ಕಾರ್ಯಾಚರಣೆ ನಡೆದಿದೆ. ಆದರೆ  ಬಸ್ಸುಗಳಲ್ಲಿ ಮತ್ತೆ ಮತ್ತೆ ಕರ್ಕಶ ಧ್ವನಿ ಹೊರಡಿಸುವ ಸಾಧನಗಳನ್ನು ಅಳವಡಿಸಲಾಗುತ್ತಿದೆ. ಪೊಲೀಸ್‌ ಫೋನ್‌ ಇನ್‌ ಕಾರ್ಯ ಕ್ರಮಗಳಲ್ಲಿ  ಕರ್ಕಶ ಹಾರ್ನ್ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ. ಶನಿವಾರ ಖಾಸಗಿ ಬಸ್ಸು ಮಾತ್ರವಲ್ಲದೆ ಕೆಎಸ್‌ಆರ್‌ಟಿಸಿ ಬಸ್ಸು ಗಳಲ್ಲಿಯೂ ಕರ್ಕಶ ಹಾರ್ನ್ ವಿರುದ್ಧ  ಕಾರ್ಯಾಚರಣೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next