Advertisement

ಮರ್ಯಾದಾ ಹತ್ಯೆ: ಯುವತಿಯನ್ನು ಕೊಂದ ಹೆತ್ತವರು

07:19 PM Jun 29, 2018 | udayavani editorial |

ಮುಜಫ‌ರನಗರ : ಮರ್ಯಾದೆಗೇಡು ಹತ್ಯೆ ಪ್ರಕರಣವೊಂದರಲ್ಲಿ 20ರ ಹರೆಯದ ಯುವತಿಯನ್ನು ಆಕೆಯ ಹೆತ್ತವರೇ ಕೊಂದಿರುವ ಘಟನೆ  ಜಿಲ್ಲೆಯ ತೇವಡಾ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ತಮ್ಮ ಸಮುದಾಯಕ್ಕೆ ಸೇರದ ನೆರೆಮನೆಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಅಸಮಾಧಾನಗೊಂಡಿದ್ದ ಹೆತ್ತವರು ತಮ್ಮ ಮಗಳನ್ನು ಕುತ್ತಿಗೆ ಬಿಗಿದು ಕೊಂದರೆಂದು ಗ್ರಾಮಾಂತರ ಎಸ್‌ಪಿ ಅಜಯ್‌ ಸಹದೇವ್‌ ತಿಳಿಸಿದ್ದಾರೆ. 

ಕೊಲೆ ಆರೋಪದ ಮೇಲೆ ಹೆತ್ತವರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next