Advertisement

ಮಧೂರಿನಲ್ಲಿ ಐವರು ಸಾಧಕರಿಗೆ ಗೌರವಾರ್ಪಣೆ

05:45 AM Aug 19, 2017 | Team Udayavani |

ಕಾಸರಗೋಡು: ಮಧೂರು ಶ್ರೀ ಬೊಡ್ಡಜ್ಜ ಯಕ್ಷ ಭಾರತಿಯ ನೇತೃತ್ವದಲ್ಲಿ ವಿವಿಧ ತಂಡಗಳ ಯಕ್ಷಗಾನ ಕೂಟದ ಯಕ್ಷೋತ್ಸವ ಸಮಾರೋಪ ಸಮಾರಂಭದಂದು ಐವರು ಸಾಧಕರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

ಹಿರಿಯ ಯಕ್ಷಗಾನ ಕಲಾವಿದ ರಘುರಾಮ ಕೋಳಿಯಡ್ಕ, ನಿವೃತ್ತ ಸುಭೇದಾರ್‌ ಧರ್ಮೇಂದ್ರ ಆಚಾರ್ಯ, 40 ವರ್ಷಗಳಿಂದ ಮಧೂರು ದೇವಸ್ಥಾನ ಪರಿಸರದಲ್ಲಿ ಹೊಟೇಲ್‌ ನಡೆಸುತ್ತಿರುವ ಶ್ಯಾಮರಾಯ ಮಯ್ಯ, ಹಿರಿಯ ಕೃಷಿಕ ಪಟ್ಲ ಬದಿಮನೆ ರಾಮಯ್ಯ ನಾೖಕ್‌ ಚೇನಕ್ಕೋಡು, ಹಿರಿಯ ಕೃಷಿಕ ಮತ್ತು ವಾಹನ ಚಾಲಕ ಪಿ.ಗೋಪಾಲ್‌ ನಾಯರ್‌ ಅವರನ್ನು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಶಾಲು ಹೊದೆಸಿ ಸ್ಮರಣಿಕೆ ಮತ್ತು ಸಮ್ಮಾನ ಪತ್ರ ನೀಡಿ ಸಮ್ಮಾನಿಸಿದರು. 

ಬಾಲಕೃಷ್ಣ ಅಗ್ಗಿತ್ತಾಯ ಅವರು ಅಧ್ಯಕ್ಷತೆ ವಹಿಸಿದರು. ಸಮ್ಮಾನಿತರ ಪರಿಚಯವನ್ನು ತಾರಾನಾಥ ಮಧೂರು, ರಾಜಾರಾಮ ಮಾಸ್ಟರ್‌, ಸೀತಾರಾಮ ಮಾಸ್ಟರ್‌, ವೇಣುಗೋಪಾಲ ಕಲ್ಲೂರಾಯ ಮತ್ತು ವಾಮನ ಆಚಾರ್ಯ ನೀಡಿದರು. ಗೋಪಾಲಕೃಷ್ಣ ಅರಿಬೈಲು, ಡಾ| ರವಿಪ್ರಸಾದ್‌ ಶುಭಹಾರೈಸಿದರು. ತಮಗೆ ನೀಡಿದ ಸಮ್ಮಾನಕ್ಕೆ ಸಮ್ಮಾನಿತರು ಕೃತಜ್ಞತೆ ಅರ್ಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next