Advertisement

ಐಕಳೋತ್ಸವ ಸಾಧಕರಿಗೆ ಗೌರವ

12:35 PM Jan 29, 2018 | Team Udayavani |

ಕಿನ್ನಿಗೋಳಿ: ಕಂಬಳ ಧಾರ್ಮಿಕ ಚೌಕಟ್ಟಿನ ಹಿನ್ನಲೆಯ ಮೇಲೆ ನಿಂತಿದೆ. ಇದು ನಮ್ಮ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. ಅವರು ಜ. 27 ರಂದು ಶನಿವಾರ ಇತಿಹಾಸ ಪ್ರಸಿದ್ದ ಐಕಳ ಭಾವ ಕಾಂತಾಬಾರೆ ಬೂದಬಾರೆ ಜೊಡುಕರೆ ಕಂಬಳದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಶಾಸಕ ವಿನಯ ಕುಮಾರ್‌ ಸೊರಕೆ ಉದ್ಘಾಟಿಸಿದರು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು, ಉಮಾನಾಥ ಕೋಟ್ಯಾನ್‌, ಐಕಳ ಬಾವ ಯಜಮಾನರಾದ ದೋಗಣ್ಣ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಣೈ, ತಾರಾ ನಟಿ ಚಿರಶ್ರೀ ಅಂಚನ್‌, ನವೀನಚಂದ್ರ ಶೆಟ್ಟಿ , ಶೆಡ್ಡೆ ಮಂಜುನಾಥ ಭಂಡಾರಿ, ಉದ್ಯಮಿ ಐಕಳ ಗುಣಪಾಲ ಶೆಟ್ಟಿ, ಇರ್ವತ್ತೂರು ಭಾಸ್ಕರ ಕೋಟ್ಯಾನ್‌, ಎಪಿಎಂಸಿ ಅಧ್ಯಕ್ಷ ಪ್ರಮೋದ್‌ ಕುಮಾರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಗಣೇಶ್‌ ಶೆಟ್ಟಿ ಐಕಳ, ಶಶಿಕುಮಾರ್‌ ಬೊಲ್ಯೂಟ್ಟು , ರಘುರಾಮ ಆಡ್ಯಂತಾಯ, ಮಹಾಬಲ ಶೆಟ್ಟಿ ಐಕಳ, ದಿವಾಕರ ಸಾಮಾನಿ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಗಫೂರ್‌, ಕಂಬಳ ಸಮಿತಿಯ ಚಿತ್ತರಂಜನ್‌ ಭಂಡಾರಿ, ಐಕಳ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್‌ ರಾವ್‌, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಸದಾನಂದ ಕುಂದರ್‌, ಆನಂದ ಗೌಡ, ಶಶಿಧರ ಐಕಳ ಹರೀಶ್‌ ಶೆಟ್ಟಿ ತಾಮಣಿಗುತ್ತು, ಮುಂಬಯಿ ಸಮಿತಿಯ ಕುಶಲ್‌ ಭಂಡಾರಿ ಐಕಳ ಬಾವ, ಗಣನಾಥ ಜೆ. ಶೆಟ್ಟಿ ಐಕಳ ಬಾವ, ತಿಲಕ್‌ ರಾಜ್‌ ಬಲ್ಲಾಳ್‌ ಐಕಳ ಬಾವ, ಪುರಂದರ ಶೆಟ್ಟಿ ಐಕಳಬಾವ, ವೇಣುಗೋಪಾಲ ಶೆಟ್ಟಿ ಐಕಳ ಬಾವ, ಸ್ವರಾಜ್‌ ಶೆಟ್ಟಿ, ಮನಮೋಹನ ಕೊಂಡೆ ಐಕಳ ಬಾವ, ಸಚಿನ್‌ ಕೆ. ಶೆಟ್ಟಿ ಐಕಳ ಬಾವ, ಸಚಿನ್‌ ಶೆಟ್ಟಿ ಐಕಳ ಬಾವ, ಜಯಪಾಲ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು. ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು. ನವೀನ್‌ ಶೆಟ್ಟಿ ಎಡ್ಮೆಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಗೌರವ 
ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌ ರಾಜೇಂದ್ರ ಕುಮಾರ್‌, ಶಾಸಕ ವಿನಯ ಕುಮಾರ್‌ ಸೊರಕೆ, ಅದಾನಿ ಗ್ರೂಪ್‌ನ ಕಿಶೋರ್‌ ಆಳ್ವ, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉದ್ಯಮಿ ಕೃಷ್ಣ ಶೆಟ್ಟಿ ದಂಪತಿ, ಶಾಸಕ ಅಭಯಚಂದ್ರ ಜೈನ್‌ ಮತ್ತಿತರರನ್ನು ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next