Advertisement

ಅಗಲಿದ ನಾಯಕಿಗೆ ಗಣ್ಯರ ನಮನ

02:36 PM Jul 24, 2018 | |

ನಾಲತವಾಡ: ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅಗಲಿಕೆಗೆ ಗಣ್ಯರ ನುಡಿನಮನಗಳ ಅರ್ಪಣೆಗಾಗಿ ನಿವಾಸದ ಆವರಣದಲ್ಲಿ ಬೃಹತ್‌ ವೇದಿಕೆ ಸಿದ್ದಪಡಿಸಲಾಗಿತ್ತು.

Advertisement

ವೇದಿಕೆಯಲ್ಲಿ ದಿ| ವಿಮಲಾಬಾಯಿ ದೇಶಮುಖರ ಅಂತಿಮ ದರ್ಶನಕ್ಕೆ ತಂಡೋಪ ತಂಡವಾಗಿ ಆಗಮಿಸಿದ ಮಾಜಿ ಹಾಗೂ ಹಾಲಿ ಸಚಿವರು, ಶಾಸಕರು, ಗಣ್ಯರು ಹಾಗೂ ಶ್ರೀಗಳು ದೇಶಮುಖ ಅವರ ಆತ್ಮಕ್ಕೆ ಶಾಂತಿ ಕೋರಿ ನುಡಿನಮನಗಳನ್ನು ಅರ್ಪಿಸಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಎಂದಿಗೂ ಹಟ ಮಾಡಿ ಅಧಿಕಾರ ಪಡೆಯದ ದೇಶಮುಖ ಮನೆತನದ ಸರಳ, ಸಜ್ಜನಿಕೆ ಇಂದಿನ ರಾಜಕಾರಣಿಗಳು ಕಲಿಯಬೇಕು. ನನಗೂ ದೇಶಮುಖ-ನಾಡಗೌಡ ಕುಟುಂಬಕ್ಕೆ ಅನೋನ್ಯ ಸಂಬಂಧವಿದೆ. ಸಾವಿರಾರು ಎಕರೆ ಜಮೀನು ದಾನ ನೀಡಿ ಇಂದಿಗೂ ಈ ಭಾಗದ 40 ಹಳ್ಳಿಗಳ ಬಡವರ ಪಾಲಿಗೆ ದೇವರೆಂದೇ ಖ್ಯಾತಿಗಳಿಸಿದ ವಿಮಲಾಬಾಯಿ ದೇಶಮುಖ ಅವರ ಅಗಲಿಕೆ ನೋವನ್ನು ನಾಡಗೌಡ-ದೇಶಮುಖ ಮನೆತನಕ್ಕೆ ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುವೆ ಎಂದರು.

ಶಾಕರಾದ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ, ದೇಶಮುಖ ಅವರ ರಾಜಕೀಯ ಬದುಕು ಮಾದರಿಯಾಗಿದೆ ಎಂದರು. ಮಾಜಿ ಸಚಿವ ಸಿ.ಎಸ್‌. ನಾಡಗೌಡ ಮಾತನಾಡಿ, ವಿಮಲಾಬಾಯಿ ದೇಶಮುಖ ಅವರ ಅಗಲಿಕೆಯಿಂದ ನಾಡಗೌಡ ಮನೆತನಕ್ಕೆ ಆಘಾತ ಉಂಟಾಗಿದೆ. ಈ ಭಾಗದಲ್ಲೇ ಬಡವರ ಸಮಸ್ಯೆಗಳಿಗೆ ದೇಶಮುಖರ ಮನೆಯೇ ನ್ಯಾಯಾಲಯವಾಗಿತ್ತು ಎಂದರು.

ಶ್ರದ್ಧಾಂಜಲಿ ಸಭೆ ವೇದಿಕೆಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಿರೂರಿನ ಡಾ| ಬಸವಲಿಂಗ ಮಹಾಸ್ವಾಮಿಗಳು, ಗದಗ ಕಪ್ಪತಗುಡ್ಡದ ಶಿವಕುಮಾರ ಮಹಾಸ್ವಾಮಿಗಳು, ಬಿದರಕುಂದಿಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಹಾದೇವ್‌ ಶಾಸ್ತ್ರಿಗಳು, ಮಾಜಿ ಸಚಿವ ಮುರುಗೇಶ ನಿರಾಣಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಎಂ.ಬಿ. ನಾವದಗಿ, ಎಂ.ಎ. ಖಾಲೆಬಾಗ್‌, ಅಡಿವೆಪ್ಪ ಕಡಿ, ಚನ್ನವೀರ ಸಗರನಾಳ, ಅಬ್ದುಲ್‌ ರಹೆಮಾನ್‌ ಬಿದರಕುಂದಿ, ಬಿ.ಎಂ. ಹಿರೇಮಠ, ಚಿ.ಎಸ್‌. ಹಿರೇಮಠ, ಎಲ್‌.ಆರ್‌. ಗೊಳಸಂಗಿ, ಸಚಿನ ದೇಶಮುಖ, ಎಂ.ಪಿ. ನಾಡಗೌಡ, ಎಸ್‌.ಆರ್‌. ಪಾಟೀಲ, ಮಹಾಂತೇಶ ಕೌಜಲಗಿ, ಮಾಜಿ ಶಿವಪುತ್ರಪ್ಪ ದೇಸಾಯಿ, ಬಿ.ಎಸ್‌. ಪಾಟೀಲ ಯಾಳಗಿ, ಅರವಿಂದ ಕೊಪ್ಪ, ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಅಂತಿಮ ನುಡಿ ನಮನ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next