Advertisement

ಅಂತರ್ಜಾತಿ ಪ್ರೇಮಕ್ಕೆ ಯುವಕನ “ಮರ್ಯಾದಾ ಹತ್ಯೆ”

10:50 PM Jun 26, 2023 | Team Udayavani |

ಅಫಜಲಪುರ: ಅನ್ಯ ಜಾತಿಯ ಯುವಕ-ಯುವತಿ ಪ್ರೀತಿಸುತ್ತಿರುವುದನ್ನು ತಿಳಿದು ಯುವತಿಯ ಸಂಬಂಧಿ ಕರು ಯುವಕನನ್ನು “ಮರ್ಯಾದಾ ಹತ್ಯೆ” ಮಾಡಿರುವ ಘಟನೆ ತಾಲೂಕಿನ ಚಿಣಮಗೇರಾ ಗ್ರಾಮದ ಬಳಿ ನಡೆದಿದೆ. ಕಲಬುರಗಿ ನಗರದ ತಾರಫೈಲ್‌ ಬಡಾವಣೆ ನಿವಾಸಿ ವಿಕ್ಕಿರಾಜ್‌ ಲಿಂಗೇರಿ (30) ಕೊಲೆಗೀಡಾದವರು. ಪ್ರಕರಣಕ್ಕೆ ಸಂಬಂ ಧಿಸಿ ದೇವಲ ಗಾಣಗಾಪುರ ಠಾಣೆಯಲ್ಲಿ ಮೃತ ಯುವಕನ ಸಹೋದರ ಶರಣಪ್ಪ ಲಿಂಗೇರಿ ದೂರು ದಾಖಲಿಸಿದ್ದಾರೆ.

Advertisement

ನನ್ನ ಸಹೋದರ ಹಾಗೂ ಬಂಜಾರಾ ಸಮುದಾಯದ ಯುವತಿ ಪ್ರೀತಿಸುತ್ತಿದ್ದರು. ಇದೇ ಕಾರಣಕ್ಕೆ ಹುಡುಗಿ ಸಂಬಂಧಿಕರಾದ ಸತೀಶ್‌, ವಿಕ್ರಮ, ಲೋಕೇಶ, ಮನೋಹರ, ವಿಮಲಾ, ಪದ್ಮಾ ಹಾಗೂ ಬಾಷಾ ಅವರು ನಮ್ಮೊಂದಿಗೆ ಜಗಳವಾಡಿದ್ದಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದರು.

ಜೂ.25ರಂದು ನನ್ನ ಸಹೋದರ ಕೆಲಸ ಮಾಡಿ ಬರುವುದಾಗಿ ಮನೆಯಿಂದ ಹೋದವನು ರಾತ್ರಿಯಾದರೂ ಬಾರದಿದ್ದಾಗ ನಾವು ಹುಡುಕಾಡಿದ್ದೆವು. ಜೂ.26ರಂದು ಬೆಳಗ್ಗೆ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಯುವಕನೊಬ್ಬನ ಕೊಲೆಯಾಗಿದೆ ಎಂದು ಫೋಟೋಗಳು ವೈರಲ್‌ ಆಗಿದ್ದನ್ನು ನೋಡಿ ಚಿಣಮಗೇರಾ ಗ್ರಾಮದ ಬಳಿ ಬಂದು ನೋಡಿದಾಗ ಅದು ನನ್ನ ಸಹೋದರನ ಶವವೆಂದು ತಿಳಿಯಿತು ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next