Advertisement

ಜೇನು ಕಚ್ಚಿ ವ್ಯಕ್ತಿ ಸಾವು; 8 ಮಂದಿ ಗಂಭೀರ ಗಾಯ

08:24 PM Apr 06, 2022 | Team Udayavani |

ಸಕಲೇಶಪುರ: ಜೇನುಹುಳುಗಳ ಹಿಂಡೊಂದು ಕಚ್ಚಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟರೆ ಏಳೆಂಟು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನಲ್ಲಿ ತಾಲೂಕಿನ ಬೆಳಗೋಡು ಹೋಬಳಿಯ ಗುಲಗಳಲೆ ಗ್ರಾಮದಲ್ಲಿ ನಡೆದಿದೆ.

Advertisement

ಪಟ್ಟಣದ ರಾಘವೇಂದ್ರ ನಗರ ಬಡಾವಣೆ ನಿವಾಸಿ ಚಂದ್ರು (70) ಮೃತ ಪಟ್ಟ ದುರ್ದೈವಿಯಾಗಿದ್ದಾರೆ .

ಗುಲಗಳಲೆ ಗ್ರಾಮದ ಸಂಬಂಧಿಕರೋರ್ವರ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಹಿಂತಿರುಗಿ ಬರುವಾಗ ಜೇನಿನ ಹಿಂಡೊಂದು ದಾಳಿ ನಡೆಸಿದ್ದು ಈ ಸಂಧರ್ಭದಲ್ಲಿ ಜೊತೆಗಿದ್ದ ಅವರ‌ ಪತ್ನಿ ಸುಲೋಚನಾ ಹಾಗೂ ಅವರ ತಂಗಿ ಪಾರ್ವತಿ ಎಂಬುವರು ಸಹ ಗಂಭೀರ ಗಾಯಗೊಂಡು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ನೈಸರ್ಗಿಕ ಜೀವಸಂಕುಲ ಮರೆತು ಅಂಜನಾದ್ರಿಗಾಗಿ ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಸಿದ್ಧತೆ?

ಗುಲಗಳಲೆ ಗ್ರಾಮದ ಶಿವಾನಂದ್ ಹಾಗೂ ಅಜೀಜ್ ಎಂಬುವರು ಸಹ ಜೇನುಹುಳದ ದಾಳಿಯಿಂದ ಗಾಯಗೊಂಡಿದ್ದಾರೆ‌.ಸಾವಿರಾರು ಜೇನುನೊಣಗಳು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯವರು ಬಾಗಿಲು ಹಾಕಿಕೊಂಡಿದ್ದರಿಂದ ಜೇನುಹುಳಗಳ ದಾಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗಿಲ್ಲ. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next