Advertisement

Manipal ಆಟೋ ರಿಕ್ಷಾ ಚಾಲಕನ ಪ್ರಾಮಾಣಿಕತೆ: ಚೆಕ್‌, ದಾಖಲೆಗಳ ಹಸ್ತಾಂತರ

11:47 PM Sep 23, 2023 | Team Udayavani |

ಮಣಿಪಾಲ: ಆಟೋ ರಿಕ್ಷಾ ಚಾಲಕರು – ಮಾಲಕರ ಸಂಘದ ಸದಸ್ಯ ಸತೀಶ್‌ ತಮ್ಮ ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋದ ಚೆಕ್‌ ಮತ್ತು ದಾಖಲೆಗಳನ್ನು ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಸೆ. 18ರಂದು ಮಣಿಪಾಲದಿಂದ ಉಡುಪಿಗೆ ಬಾಡಿಗೆ ತೆರಳಿದ ವೇಳೆ ಅನಂತ್‌ ದೇವಾಡಿಗ ಅವರ ಪುತ್ರ 7 ಲಕ್ಷ ರೂ. ಮೌಲ್ಯದ ಚೆಕ್‌ ಮತ್ತು ಪ್ರಮುಖ ದಾಖಲೆಗಳನ್ನು ರಿಕ್ಷಾದಲ್ಲಿ ಬಿಟ್ಟಿದ್ದರು. ಸತೀಶ್‌ ಅವರು ಸಂಘದ ಅಧ್ಯಕ್ಷ ವಿಜಯ್‌ ಪುತ್ರನ್‌ ಹಿರೇಬೆಟ್ಟು ಅವರಿಗೆ ವಿಷಯ ತಿಳಿಸಿ ಮಣಿಪಾಲ ಪೊಲೀಸರ ಸಮ್ಮುಖದಲ್ಲಿ ಅನಂತ್‌ ದೇವಾಡಿಗ ಅವರನ್ನು ಕರೆಸಿ ದಾಖಲೆಗಳನ್ನು ಮತ್ತು ಚೆಕ್‌ ಅನ್ನು ಹಸ್ತಾಂತರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next